ಬ್ರೇಕಿಂಗ್ ನ್ಯೂಸ್
15-09-20 07:39 pm Headline Karnataka News Network ಕ್ರೈಂ
ಆಲಪ್ಪುಳ, ಸೆಪ್ಟೆಂಬರ್15: ಸೆಲ್ಫಿ ಹುಚ್ಚಿನಿಂದ ಏನೆಲ್ಲ ದುರಂತ ಎದುರಾದ್ರೂ ಜನರು ಎಚ್ಚತ್ತುಕೊಂಡಿಲ್ಲ. ಇಲ್ಲೊಬ್ಬಳು ತಾಯಿ, ಬೀಚ್ ನಲ್ಲಿ ನಿಂತು ಮಗುವಿನ ಜೊತೆ ಸೆಲ್ಫೀ ಕ್ಲಿಕ್ಕಿಸಲು ಹೋಗಿ ಮಗುವನ್ನೇ ಕಳಕೊಂಡಿದ್ದಾಳೆ. ತಾಯಿಯ ಸೆಲ್ಫೀ ಹುಚ್ಚಿನಿಂದಾಗಿ ಕೈನಲ್ಲಿ ಹಿಡಿದುಕೊಂಡಿದ್ದ ಎರಡು ವರ್ಷದ ಮಗು ಸಮುದ್ರಪಾಲಾದ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ.
ಭಾನುವಾರ ಸಂಜೆ ಘಟನೆ ನಡೆದಿದ್ದು ಪೊಲೀಸರು ಮತ್ತು ಸ್ಥಳೀಯರ ಹುಡುಕಾಟದ ಬಳಿಕ ಮಗುವಿನ ಶವ ಎರಡು ದಿನಗಳ ನಂತರ ಆಲಪ್ಪುಳದ ಗೆಲಿಲಿಯೋ ಬೀಚ್ ನಲ್ಲಿ ಪತ್ತೆಯಾಗಿದೆ. ಮೃತ ಮಗುವಿನ ಹೆಸರು ಅಧಿಕೃಷ್ಣ ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ. ತಟರಕ್ಷಣಾ ಪಡೆ ಮತ್ತು ಸ್ಥಳೀಯ ಮೀನುಗಾರರು ಪತ್ತೆ ಕಾರ್ಯಾಚರಣೆ ನಡೆಸಿದ್ದರು.
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತನ್ನಿಬ್ಬರು ಮಕ್ಕಳು ಮತ್ತು ಸದರನ ಇನ್ನೊಂದು ಮಗುವಿನ ಜೊತೆ ಬೀಚ್ ನೋಡಲು ಬಂದಿದ್ದರು. ಸಮುದ್ರ ಅಬ್ಬರ ಹೆಚ್ಚಿದ್ದರಿಂದ ಅಲ್ಲಿನ ಸೆಕ್ಯುರಿಟಿ ಬೀಚ್ ಹೋಗದಂತೆ ತಡೆಯುತ್ತಿದ್ದ. ಆದರೆ ತಾಯಿ, ಮಕ್ಕಳು ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಅಲ್ಲಿನ ಇಎಸ್ಐ ಆಸ್ಪತ್ರೆಯ ಎಡೆಯಿಂದ ನುಸುಳಿಕೊಂಡು ಬೀಚ್ ನತ್ತ ಬಂದಿದ್ದರು. ಬೀಚ್ ನಲ್ಲಿ ಮಕ್ಕಳ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಬೃಹತ್ ಅಲೆಯೊಂದು ಎದ್ದು ಬಂದಿದ್ದು ತಾಯಿ, ಮಕ್ಕಳು ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ, ದೂರದಲ್ಲಿ ನಿಂತಿದ್ದ ಸಂಬಂಧಿಕನೊಬ್ಬ ಓಡಿ ಬಂದು ಮಹಿಳೆ ಮತ್ತು ಆರು ಮತ್ತು ಏಳು ವರ್ಷದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಎರಡೂವರೆ ವರ್ಷದ ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಒಂದು ಕ್ಷಣದ ಮೈಮರೆವು ಮಗುವನ್ನು ಬಲಿ ತೆಗೆದುಕೊಂಡಿತ್ತು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am