ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ನಾನು ರಾ 'ಗಿಣಿ' ಕ್ಲೋಸ್ ಇದ್ದೇವೆ; ಸಿಸಿಬಿ ಕಚೇರಿ ಮುಂದೆ ಯುವಕನ ಹೈಡ್ರಾಮಾ

06-09-20 01:54 pm       Bangalore Correspondant   ಕ್ರೈಂ

ನಟಿ ರಾಗಿಣಿ ಮತ್ತು ನಾನು ‌ಕ್ಲೋಸ್‌ ಇದ್ದೇವೆ. ಅವರ ಜೊತೆ ಫೋಟೋ ದಲ್ಲಿ ಇರುವುದು ನಾನೇ. ನಿಮಗೆ ಬೇಕಾದ 13ನೇ ಆರೋಪಿ ನಾನೇ ಎಂದು ಸಿಸಿಬಿ ಕಚೇರಿಯ ಮುಂದೆ ಇಂದು ಬೆಳ್ಳಂಬೆಳಗ್ಗೆ ಹೈಡ್ರಾಮಾ.

ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರಿನ ಸಿಸಿಬಿ ಕಚೇರಿಯ ಮುಂದೆ ಇಂದು ಬೆಳ್ಳಂಬೆಳಗ್ಗೆ ಹೈಡ್ರಾಮಾ ಸೃಷ್ಟಿಯಾಗಿದ್ದು,ಬೈಕ್ ನಲ್ಲಿ ಬಂದ ಯುವಕನೊಬ್ಬ ಡ್ರಗ್ಸ್‌ ದಂಧೆಯಲ್ಲಿ ನಾನೂ ಭಾಗಿಯಾಗಿದ್ದೇನೆ, ನಟಿ ರಾಗಿಣಿ ಮತ್ತು ನಾನು ‌ಕ್ಲೋಸ್‌ ಇದ್ದೇವೆ. ಅವರ ಜೊತೆ ಫೋಟೋ ದಲ್ಲಿ  ಇರುವುದು ನಾನೇ. ನಿಮಗೆ ಬೇಕಾದ 13ನೇ ಆರೋಪಿ ನಾನೇ…ಅರೆಸ್ಟ್‌ ಮಾಡಿ…ಎಂದು ಹೇಳಿ ಕೆಲ ಕಾಲ ಗೊಂದಲ ಸೃಷ್ಟಿಸಿದ್ದಾನೆ.

ಮಾದಕ ವಸ್ತು ಪೂರೈಕೆ ಜಾಲದ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ನಟಿ ರಾಗಿಣಿ ದ್ವಿವೇದಿಯನ್ನು ಬಂಧಿಸಿದ್ದಾರೆ. ಸದ್ಯ ಇವರು ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ವಶದಲ್ಲಿರಲಿದ್ದು, ಈ ನಡುವೆಯೇ ಯುವಕ ಕಚೇರಿ ಎದುರು ಬಂದು ಹೈಡ್ರಾಮಾ ಮಾಡಿದ್ದಾನೆ. ಇಲ್ಲಿಯವರೆಗೆ ಒಟ್ಟು 12 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, 13ನೆಯವ ನಾನೇ ಎಂದಿರುವ ಯುವಕ, ನನ್ನನ್ನು ಅರೆಸ್ಟ್‌ ಮಾಡಿ ಎಂದು ಗೋಗರೆದಿದ್ದಾನೆ! ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಯುವಕನ ಹೆಸರು ಅನಿರುದ್ಧ್ ಎಂದು ತಿಳಿದುಬಂದಿದೆ. ಈತ ಬೆಂಗಳೂರಿನ ಜಯನಗರ ಆರ್‌ಟಿಒ ಕಚೇರಿಯ ಎಸ್‍ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಈತ ರಾಗಿಣಿ ಆಪ್ತ ರವಿಶಂಕರ್‌ನ ಸ್ನೇಹಿತ ಎಂದು ತಿಳಿದುಬಂದಿದೆ. ಇದೇ ಆರ್‌ಟಿಒ ಕಚೇರಿಯಲ್ಲಿ ರವಿಶಂಕರ್ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದನು. ಸಿಸಿಬಿ ಪೊಲೀಸ್ ಕಚೇರಿಗೆ ಬಂದಿದ್ದ ಸಂದರ್ಭದಲ್ಲಿ ಅನಿರುದ್ಧ್‌ ಡ್ರಗ್ಸ್‌ ಸೇವನೆ ಮಾಡಿದ್ದ ಎಂದಿದ್ದಾರೆ ಪೊಲೀಸರು.

Join our WhatsApp group for latest news updates