ಬ್ರೇಕಿಂಗ್ ನ್ಯೂಸ್
14-01-21 12:36 pm Mangalore Correspondent ಕ್ರೈಂ
ಮಂಗಳೂರು, ಜ.14: ಮಂಗಳೂರು ನಗರದಲ್ಲಿ ಮಕ್ಕಳ ಕಳ್ಳರಿದ್ದಾರೆಂಬ ವದಂತಿ ಕೇಳಿಬಂದಿದೆ. ಬುಧವಾರ ಬೆಳಗ್ಗೆ ಕುದ್ರೋಳಿಯ ಅಳಕೆಯಲ್ಲಿ ಒಬ್ಬ ಮಹಿಳೆಯ ಬಗ್ಗೆ ಗುಮಾನಿ ವ್ಯಕ್ತಪಡಿಸಿ, ಜನರು ಸೇರಿ ಆಕೆಯನ್ನು ಗದರಿ, ಪೊಲೀಸರಿಗೊಪ್ಪಿಸಿದ್ದರು. ನಿನ್ನೆ ಸಂಜೆ ಹೊತ್ತಿಗೆ ಕೊಂಚಾಡಿಯ ಮಹಾಲಸಾ ದೇವಸ್ಥಾನ ಆವರಣದಲ್ಲಿ ಮಗುವೊಂದನ್ನು ಅಪಹರಿಸುವ ಯತ್ನ ನಡೆದಿದೆ ಎನ್ನಲಾಗಿದೆ.
ಕೊಂಚಾಡಿಯಲ್ಲಿ ಬೈಕಿನಲ್ಲಿ ಬಂದಿದ್ದ ಇಬ್ಬರು ಸೇರಿ ಆಟವಾಡುತ್ತಿದ್ದ ಮಗುವೊಂದನ್ನು ಮುಸುಕು ಹಾಕಿ, ಹಿಡಿಯಲು ಯತ್ನಿಸಿದ್ದಾರೆ. ಮಗುವಿನ ತಲೆಯ ಭಾಗಕ್ಕೆ ಮುಸುಕು ಹಾಕುತ್ತಿದ್ದಂತೆ ಅಲ್ಲಿ ಆಟವಾಡುತ್ತಿದ್ದ ಇತರೇ ಮಕ್ಕಳು ಬೊಬ್ಬೆ ಹಾಕಿದ್ದಾರೆ. ಅಷ್ಟರಲ್ಲಿ ಬೈಕಿನಲ್ಲಿ ಬಂದವರು ಪರಾರಿಯಾಗಿದ್ದಾರೆ.
ಮಕ್ಕಳ ಮಾತು ಕೇಳಿ, ಸ್ಥಳೀಯರು ಭಯಗೊಂಡಿದ್ದು ಅಪಹರಣ ಯತ್ನಕ್ಕೆ ಒಳಗಾದ ಮಗುವಿನ ಪಾಲಕರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆಗಂತುಕರ ಪತ್ತೆಗಾಗಿ ಕೊಂಚಾಡಿ ಪರಿಸರದ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮಕ್ಕಳ ಅಪಹರಣಕ್ಕೆ ಯತ್ನಿಸಿದ್ದು ಹೌದೋ, ಅಲ್ಲವೋ ಎನ್ನುವ ಬಗ್ಗೆ ಖಾತ್ರಿಪಡಿಸಲು ದಾಖಲೆ ಹುಡುಕುತ್ತಿದ್ದಾರೆ.
ಇದೇ ವೇಳೆ, ಅಳಕೆಯಲ್ಲಿ ಮಹಿಳೆಯ ಕಿತಾಪತಿ ಬಗ್ಗೆ ಬಂದರು ಪೊಲೀಸರಲ್ಲಿ ವಿಚಾರಿಸಿದರೆ, ಅಲ್ಲಿ ಮಹಿಳೆಯ ಬಗ್ಗೆ ಗುಮಾನಿ ಬಂದಿದ್ದು ಫೋಟೊ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದು ಗೊತ್ತು. ಅದು ಮಕ್ಕಳ ಅಪಹರಣದ ವಿಷಯ ಅಲ್ಲ. ಆ ಮಹಿಳೆ, ಉತ್ತರ ಭಾರತದ ಮೂಲದವರಾಗಿದ್ದು ಅಳಕೆ ಪರಿಸರದಲ್ಲಿ ಗುಜರಾತಿ ಮೂಲದವರ ಮನೆಗೆ ಬಂದು ಹಣ ಕೇಳುತ್ತಿದ್ದರಂತೆ. ಅದರ ಬಗ್ಗೆ ಯಾರೂ ಕಂಪ್ಲೇಂಟ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
A woman was held by locals at Konchady in Mangalore alleging of Kidnapping Children. The Kankandy Town police have registered the case against her.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm