ಬ್ರೇಕಿಂಗ್ ನ್ಯೂಸ್
04-04-26 04:36 pm HK News Staffer ಕ್ರೈಂ
ಬೆಂಗಳೂರು, ಎಪ್ರಿಲ್ 4: ಐಟಿ ಕಂಪನಿಯ ಅಧಿಕಾರಿಯೆಂದು ಸುಳ್ಳು ಹೇಳಿ ಸಿಎಸ್ಆರ್ ಫಂಡ್ ಒದಗಿಸುವುದಾಗಿ ಭರವಸೆ ನೀಡಿ ₹6 ಕೋಟಿ ವಂಚಿಸಿದ ಆರೋಪ ಕೇಳಿಬಂದಿದ್ದು ಈ ಬಗ್ಗೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
2025ರ ಸೆಪ್ಟೆಂಬರ್ 1 ಮತ್ತು 2026ರ ಮಾರ್ಚ್ 20ರ ನಡುವೆ ವಂಚನೆ ನಡೆದಿದೆ ಎಂದು ಹೇಳಲಾಗಿದ್ದು, ಗಗನ್ ಎನ್ ದೀಪ್ ಎಂಬ ವ್ಯಕ್ತಿಯೊಬ್ಬರು ಇನ್ಫೋಸಿಸ್ ಲಿಮಿಟೆಡ್ನ ಸಿಎಸ್ಆರ್ನ ಪ್ರಾದೇಶಿಕ ಮುಖ್ಯಸ್ಥ ಎಂದು ಹೇಳಿಕೊಂಡು ತಮ್ಮ ಬಳಿ ಬಂದಿದ್ದಾರೆ ಎಂದು ಆರೋಪಿಸಿ ಮೈಸೂರು ಮರ್ಕೆಂಟೈಲ್ ಕಂಪನಿ ಮಾರ್ಚ್ 30 ರಂದು ದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಮೂಲಸೌಕರ್ಯ, ಸೌಲಭ್ಯಗಳ ಕಾರ್ಯಾಚರಣೆ, ಸಾರ್ವಜನಿಕ ಸಂಪರ್ಕ ಮತ್ತು ಸಿಎಸ್ಆರ್ ಕಾರ್ಯಗಳ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಹರ್ಷ ಜೆ ಮತ್ತು ಜಾಗತಿಕ ಮೂಲಸೌಕರ್ಯ ಮತ್ತು ಹವಾಮಾನ ಕ್ರಿಯೆಯ ಹಿರಿಯ ಉಪಾಧ್ಯಕ್ಷ ನೀಲಾದ್ರಿ ಪ್ರಸಾದ್ ಮಿಶ್ರಾ ಎಂಬ ಹಿರಿಯ ಅಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಗಗನ್ ದೀಪ್ ಹೇಳಿ ನಂಬಿಸಿದ್ದ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ದತ್ತಿ ಚಟುವಟಿಕೆಗಳನ್ನು ತಿಳಿದು, ಅದಕ್ಕೆ ಬೆಂಬಲ ನೀಡಲು ಇನ್ಫೋಸಿಸ್ ಲಿಮಿಟೆಡ್ನಿಂದ ಸಿಎಸ್ಆರ್ ಫಂಡ್ ಒದಗಿಸುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಇನ್ಫೋಸಿಸ್ ಅನ್ನು ಪ್ರತಿನಿಧಿಸುವ ನಾಲ್ಕರಿಂದ ಐದು ವ್ಯಕ್ತಿಗಳ ತಂಡವನ್ನು ಉಡುಪಿ, ಮಂಗಳೂರು ಮತ್ತು ಇತರ ಸ್ಥಳಗಳಿಗೆ ಟ್ರಸ್ಟ್ನ ಚಟುವಟಿಕೆಗಳನ್ನು ಪರಿಶೀಲಿಸಲು ಕಳುಹಿಸಿದ್ದರು. ಇದರಲ್ಲಿ ಚೇತನ್ ಮತ್ತು ತೇಜಸ್ ಎಂದು ಗುರುತಿಸಲಾದ ವ್ಯಕ್ತಿಗಳು ಇದ್ದಾರೆ ಎಂದು ದೂರಿನಲ್ಲಿ ಹೇಳಿದೆ.
ದೂರಿನ ಪ್ರಕಾರ, ಸಿಎಸ್ಆರ್ ಅನುದಾನಗಳಿಗೆ ಅನುಮೋದನೆ ಪಡೆಯುವುದು ಅಗತ್ಯವೆಂದು ಹೇಳಿಕೊಂಡ ಆರೋಪಿ ದೂರುದಾರರನ್ನು ಇನ್ಫೋಸಿಸ್ನ ನಿಯಮಿತ ವೆಂಡರ್ಸ್ಗೆ ಅರ್ನೆಸ್ಟ್ ಮನಿ ಠೇವಣಿ (ಇಎಂಡಿ) ಪಾವತಿಸುವಂತೆ ಮಾಡಿದ್ದಾರೆ. ಅನಿತಾ ವೆಂಚರ್ಸ್ ಪರವಾಗಿ ಡಿಮಾಂಡ್ ಡ್ರಾಫ್ಟ್ಗಳ ಮೂಲಕ ₹1.75 ಕೋಟಿ ಮತ್ತು ಎಎನ್ಎಸ್ ಎಂಜಿನಿಯರಿಂಗ್ ಪರವಾಗಿ ಡಿಮಾಂಡ್ ಡ್ರಾಫ್ಟ್ಗಳ ಮೂಲಕ ₹3.75 ಕೋಟಿ ಸೇರಿದಂತೆ ಒಟ್ಟು ₹6 ಕೋಟಿ ಪಾವತಿಸಲಾಗಿದೆ. ಇದರ ಹೊರತಾಗಿ ದೇವನಹಳ್ಳಿಯ ನಂದಿ ಉಪಾಚಾರ್ ಹೋಟೆಲ್ ಬಳಿ ಚಾಲಕನ ಮೂಲಕ ಆರೋಪಿಗೆ ₹30 ಲಕ್ಷ ನೀಡಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ಆರೋಪಿಗಳು 2025ರ ಅಕ್ಟೋಬರ್ 21 ರಂದು ನೀಲಾದ್ರಿ ಪ್ರಸಾದ್ ಮಿಶ್ರಾ ಅವರ ಸಹಿ ಇರುವ ಇನ್ಫೋಸಿಸ್ನಿಂದ ಬಂದಿರುವ ಶಂಕಿತ ಮಂಜೂರಾತಿ ಪತ್ರವನ್ನು ನೀಡಿದ್ದಾರೆ ಮತ್ತು ಕರ್ನಾಟಕದಾದ್ಯಂತ 855ಕ್ಕೂ ಹೆಚ್ಚು ಮನೆ ನಿರ್ಮಾಣಕ್ಕಾಗಿ ಇನ್ಫೋಸಿಸ್ ಮತ್ತು ಚಾರಿಟಬಲ್ ಟ್ರಸ್ಟ್ ನಡುವೆ 2026ರ ಜನವರಿ 8 ರಂದು ಒಟ್ಟು ₹179 ಕೋಟಿ ಅನುದಾನ ಒಪ್ಪಂದವನ್ನು ಜಾರಿಗೊಳಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಸುಳ್ಳು ಹೇಳಿದ್ದು, ಸಲ್ಲಿಸಿದ ದಾಖಲೆಗಳು ನಕಲಿಯಾಗಿವೆ. ಇಡೀ ವಹಿವಾಟು ವಂಚನೆಯಾಗಿದ್ದು, ಸಿಎಸ್ಆರ್ ಅನುದಾನಗಳಿಗಾಗಿ ಅರ್ನೆಸ್ಟ್ ಮನಿ ಠೇವಣಿ (ಇಎಂಡಿ) ಎಂಬ ಸುಳ್ಳು ನೆಪದಲ್ಲಿ ದೂರುದಾರರಿಂದ ದೊಡ್ಡ ಮೊತ್ತವನ್ನು ದೋಚಲಾಗಿದೆ. ಪದೇ ಪದೆ ಅವರು ಹೇಳಿದಂತೆ ಅನುಸರಿಸಿದರೂ ಯಾವುದೇ ಅನುದಾನ ಬಂದಿಲ್ಲ ಅಥವಾ ನಮ್ಮಿಂದ ಪಡೆದ ಮೊತ್ತವನ್ನು ಹಿಂತಿರುಗಿಸಿಲ್ಲ. ಆರೋಪಿಗಳು ಈಗ ಪ್ರತಿಕ್ರಿಯಿಸುತ್ತಿಲ್ಲ ಮತ್ತು ಉದ್ದೇಶಪೂರ್ವಕವಾಗಿಯೇ ತಪ್ಪಿಸಿಕೊಳ್ಳುತ್ತಿದ್ದಾರೆ' ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am