ಬ್ರೇಕಿಂಗ್ ನ್ಯೂಸ್
27-10-25 05:29 pm HK News Desk ಕ್ರೈಂ
ಹಾಸನ, ಅ.27 : ಕೋಟಿ ರೂಪಾಯಿ ಚೀಟಿ ದುಡ್ಡು ಬರುತ್ತೆ, ಹಣ ಸಾಲ ಕೊಟ್ಟರೆ ದುಪ್ಪಟ್ಟು ವಾಪಸ್ ಕೊಡ್ತೇನೆ ಎಂದು ನಂಬಿಸಿ ಹಾಸನದ ಟೈಲರ್ ಮಹಿಳೆಯೊಬ್ಬರು ಮೂರು ಕೋಟಿಗೂ ಅಧಿಕ ಹಣ ವಂಚಿಸಿದ್ದು ಸಂತ್ರಸ್ತ ಮಹಿಳೆಯರು ನಡುರಸ್ತೆಯಲ್ಲೇ ಆಕೆಯ ಕೂದಲು, ರವಿಕೆ ಎಳೆದಾಡಿ ಧರ್ಮದೇಟು ನೀಡಿದ್ದಾರೆ. ಇದರ ಮೊಬೈಲ್ ವಿಡಿಯೋ ಹಾಸನದಲ್ಲಿ ವೈರಲ್ ಆಗಿದೆ.
ವಂಚಕಿ ಟೈಲರ್ ಜುಟ್ಟು ಹಿಡಿದು ವಾಹನಗಳ ಮಧ್ಯೆ ಎಳೆದಾಡಿದ್ದು ಇದರ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿದೆ. ವಂಚಕಿ ಮಹಿಳೆ ವಿರುದ್ಧ ಒಂದೆಡೆ ಪ್ರಕರಣ ದಾಖಲಾಗಿದ್ದರೆ, ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಆಕೆಯೂ ದೂರು ಕೊಟ್ಟಿದ್ದಾರೆ.
ಲೇಡಿ ಟೈಲರ್ ಹೇಮಾವತಿ ಎಂಬಾಕೆ ಹಾಸನದ ಅರಳಿಪೇಟೆ ರಸ್ತೆಯಲ್ಲಿ ತನ್ನದೇ ಆದ ಟೈಲರಿಂಗ್ ಅಂಗಡಿ ಹೊಂದಿದ್ದಳು. ಜ್ಯೋತಿ ಡ್ರೆಸ್ ಮೇಕರ್ಸ್ ಎನ್ನುವ ಅಂಗಡಿಯಿದ್ದು ಬಟ್ಟೆ ಕೊಡುತ್ತಿದ್ದ ಮಹಿಳೆಯರ ಬಳಿ ಸಲುಗೆಯಿಂದ ವ್ಯವಹರಿಸುತ್ತಿದ್ದಳು. ಅವರ ಬಳಿ ಮಾತನಾಡುತ್ತ, ಮಗಳಿಗೆ ವಿದೇಶದಲ್ಲಿ ಮಾಸ್ಟರ್ಸ್ ಓದಿಸಬೇಕು. ಈಗ ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದೇನೆ ಎಂದು ಹೇಳುತ್ತಿದ್ದಳು. ಸದ್ಯಕ್ಕೆ ಒಂದಷ್ಟು ದುಡ್ಡಿನ ಅಗತ್ಯವಿದೆ, ಕೊಡಚಾದ್ರಿ ಚಿಟ್ಸ್ನಲ್ಲಿ 1 ಕೋಟಿ ರೂ.ಗೂ ಅಧಿಕ ದರಕ್ಕೆ ಚೀಟಿ ಹಾಕಿರುವೆ. ಕೆಲವೇ ತಿಂಗಳಲ್ಲಿ ಆ ಹಣ ಕೈಗೆ ಬರುತ್ತದೆ ಎಂದು ನಕಲಿ ಸ್ಲಿಪ್ಗಳನ್ನು ಮಹಿಳೆಯರಿಗೆ ತೋರಿಸಿ, ಚಿನ್ನ ಅಡವಿಟ್ಟಾದರೂ ಸರಿ ಸಾಲ ಕೊಡಿ ಎಂದು ಕೇಳುತ್ತಿದ್ದಳಂತೆ.
ಹೇಮಾವತಿ ಮಾತನ್ನು ನಂಬಿ ಕೆಲವರು ಚಿನ್ನ ಅಡವಿಟ್ಟು ಆಕೆಗೆ ಹಣ ನೀಡಿದ್ದಾರೆ. ನಿತ್ಯವೂ ಅಂಗಡಿಗೆ ಬರುವ ಮಹಿಳೆಯರನ್ನು ಮರುಳು ಮಾಡಿ, ಹಣ ಪಡೆಯುತ್ತಿದ್ದಳು. 45 ಲಕ್ಷ ರೂ.ಗಿಂತ ಹೆಚ್ಚು ಹಣ ಮೋಸ ಮಾಡಿದ್ದಾರೆ ಎಂದು ಹಾಸನ ನಗರ ಠಾಣೆ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ವಂಚಕಿ ಹೇಮಾವತಿ ಅವರಿಗೆ ಟೈಲರ್ ಅಂಗಡಿ ಬಾಡಿಗೆ ಕೊಟ್ಟಿದ್ದ ಮಾಲೀಕರು ಮಾತನಾಡಿ, ಅಂಗಡಿ ಬಾಡಿಗೆ ಎರಡು ವರ್ಷದಿಂದ ಕೊಟ್ಟಿಲ್ಲ. ಬೇಕಂತಲೇ ಹಣ ಕೊಟ್ಟಿಲ್ಲ. ವ್ಯವಹಾರ ಫಲ ಕೊಟ್ಟಿಲ್ಲ ಎಂದರೆ ಏನೋ ಹೇಳಹುದು. ಆದರೆ, ಅಂಗಡಿ ಬ್ಯುಸಿನಸ್ ಚೆನ್ನಾಗಿಯೇ ಇತ್ತು. ಆದರೂ ಬಾಡಿಗೆ ವಾಪಸ್ ಕೊಟ್ಟಿಲ್ಲ. ಮಗಳನ್ನ ವಿದೇಶಕ್ಕೆ ಕಳುಹಿಸಿದ್ದಾರೆ. ಈಕೆ ಬೇರೆ ದುಬಾರಿ ಬಟ್ಟೆ, ಕಾರು ತಗೊಂಡಿದ್ದಾರೆ. ಕೋಟಿ ಬೆಲೆ ಬಾಳುವ ಮನೆ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
A shocking incident took place in Hassan, where a local tailor woman allegedly cheated several women of over ₹3 crore, promising to double their money through a “₹1 crore chit fund scheme.” When her fraud came to light, angry victims dragged her by her hair and thrashed her in the middle of the road, as seen in viral videos circulating on social media.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am