ಬ್ರೇಕಿಂಗ್ ನ್ಯೂಸ್
29-07-25 08:54 pm HK News Desk ಕ್ರೈಂ
ದಾವಣಗೆರೆ, ಜುಲೈ 29 : ಮದುವೆಯಾಗಿ ಎಂಟು ವರ್ಷ ಆದರೂ ಗಂಡನಿಂದ ಮಕ್ಕಳಾಗಿಲ್ಲ ಅಂತ ಪರಿಚಯದ ಗೆಳೆಯನ ಸಖ್ಯ ಮಾಡಿದ್ದಳು. ಗರ್ಭಿಣಿಯೂ ಆಗಿದ್ದಳು. ಆದರೆ ಪತ್ನಿ ಗರ್ಭಿಣಿಯಾಗಿದ್ದನ್ನು ಸಂಶಯಿಸಿದ ಗಂಡ ಆಕೆಯ ಹೊಟ್ಟೆಗೆ ಕಾಲಿನಿಂದ ಒದ್ದು ಗರ್ಭಪಾತ ಮಾಡಿಸಿದ್ದ. ಇದರಿಂದ ಸಿಟ್ಟಾದ ಪತ್ನಿ ಗೆಳೆಯನಿಂದಲೇ ಪತಿಯನ್ನು ಉಪಾಯದಿಂದ ಕೊಲ್ಲಿಸಿದ್ದಳು. ಘಟನೆ ನಡೆದು18 ತಿಂಗಳ ಬಳಿಕ ವೈಯ್ಯಾರಗಿತ್ತಿ ಸಿಕ್ಕಿಬಿದ್ದಿದ್ದಾಳೆ.
ಪತಿಯ ಕೊಲೆಗೈದು ಕೇರಳದಲ್ಲಿ ಪ್ರಿಯಕರನ ಜೊತೆ ಸಂಸಾರ ನಡೆಸಿದ್ದ ಕಿಲಾಡಿ ಲೇಡಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಣಪುರ ಗ್ರಾಮದಲ್ಲಿ ಘಟನೆ ನಡೆದಿತ್ತು. ಪತಿಯ ಕೊಲೆಗೈದ ಆರೋಪಿ ಪತ್ನಿ ಲಕ್ಷ್ಮಿ(38), ಆಕೆಯ ಪ್ರಿಯಕರ ತಿಪ್ಪೇಶ್ ನಾಯ್ಕ (42) ಹಾಗೂ ಕೊಲೆಗೆ ಸಹಾಯ ಮಾಡಿದ ಸಂತೋಷ ಅಲಿಯಾಸ್ ಡಾಂಪ (38) ಬಂಧಿತ ಆರೋಪಿಗಳು.
ಅಣಪುರ ಗ್ರಾಮದ ನಿಂಗಪ್ಪನ ಜೊತೆ ಒಂಬತ್ತು ವರ್ಷಗಳ ಹಿಂದೆ ಲಕ್ಷ್ಮೀ ವಿವಾಹವಾಗಿತ್ತು. ಮದುವೆ ಆಗಿ ಎಂಟು ವರ್ಷ ಆದ್ರೂ ಮಕ್ಕಳಾಗದಿದ್ದಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವೇಳೆ ಲಕ್ಷ್ಮಿಗೆ, ಅಡಿಕೆ ಸುಲಿಯಲು ಬರುತ್ತಿದ್ದ ಶೃಂಗಾರ ಭಾಗ್ ತಾಂಡಾ ನಿವಾಸಿ ತಿಪ್ಪೇಶ್ ನಾಯ್ಕ ಪರಿಚಯವಾಗಿದ್ದು ಸ್ನೇಹ, ಪ್ರೀತಿ, ಸಲುಗೆ ಅಂತಾ ಅನೈತಿಕ ಸಂಬಂಧಕ್ಕೆ ಒಳಗಾಗಿದ್ದರು. ಇದರ ಪರಿಣಾಮ ಲಕ್ಷ್ಮಿ ಗರ್ಭಿಣಿ ಆಗಿದ್ದಳು.
ಒಂಬತ್ತು ವರ್ಷದ ಬಳಿಕ ಪತ್ನಿ ಗರ್ಭಿಣಿ ಆಗಿದ್ದಕ್ಕೆ ಪತಿ ನಿಂಗಪ್ಪನಿಗೆ ಸಂಶಯ ಬಂದಿದ್ದು ಅನೈತಿಕ ಸಂಬಂಧದ ಶಂಕೆಯಿಂದ ಸಿಟ್ಟು ಮಾಡಿದ್ದ. ಅಲ್ಲದೆ, ಕುಡಿದು ಬಂದು ಹೊಟ್ಟೆಗೆ ಒದ್ದಿದ್ದ. ಪತಿಯ ಕಾಲಿನ ಒದೆತಕ್ಕೆ ಲಕ್ಷ್ಮೀಗೆ ಗರ್ಭಪಾತ ಆಗಿತ್ತು. ಇದರಿಂದ ಪತ್ನಿ ಸಿಟ್ಟಿಗೆದ್ದು ಪತಿಯನ್ನು ಕೊಲೆ ಮಾಡುವಂತೆ ಪ್ರಿಯಕರ ತಿಪ್ಪೇಶ್ ನಾಯ್ಕನಿಗೆ ಹೇಳಿದ್ದಳು. ನಿಂಗಪ್ಪನಿಗೆ ಪಾರ್ಟಿ ಕೊಡಿಸುವುದಾಗಿ ಹೇಳಿ ನಲ್ಲೂರ ಬಳಿ ಕಂಠಪೂರ್ತಿ ಕುಡಿಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದರು.
ಮಗ ದಿಢೀರ್ ಕಾಣೆಯಾದ ಹಿನ್ನೆಲೆ ನಿಂಗಪ್ಪನಿಗಾಗಿ ಕುಟುಂಬಸ್ಥರ ಹುಡುಕಾಡಿದ್ದು ಬಳಿಕ ತಾಯಿ ಯಲ್ಲಮ್ಮ ಚನ್ನಗಿರಿ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದಾಗಲೇ ಲಕ್ಷ್ಮಿ ನಾಪತ್ತೆಯಾಗಿದ್ದು ಪೊಲೀಸರಿಗೆ ಸಂಶಯ ಬಂದು ಹುಡುಕಾಡಿದ್ದರು. ಈ ವೇಳೆ, ಆರೋಪಿ ತಿಪ್ಪೇಶ್ ಜೊತೆಗೆ ಲಕ್ಷ್ಮಿ ಸಂಸಾರ ಮಾಡುತ್ತಿರುವುದನ್ನು ತಿಳಿದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ಆರೋಪಿಗಳು ಕೃತ್ಯ ಬಗ್ಗೆ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
In a chilling case of betrayal and murder, a woman who conspired to kill her husband after he questioned her pregnancy has been arrested 18 months after the crime. The accused, who was living with her lover in Kerala following the murder, was nabbed by Davangere police along with two accomplices.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm