ಬ್ರೇಕಿಂಗ್ ನ್ಯೂಸ್
29-07-25 08:54 pm HK News Desk ಕ್ರೈಂ
ದಾವಣಗೆರೆ, ಜುಲೈ 29 : ಮದುವೆಯಾಗಿ ಎಂಟು ವರ್ಷ ಆದರೂ ಗಂಡನಿಂದ ಮಕ್ಕಳಾಗಿಲ್ಲ ಅಂತ ಪರಿಚಯದ ಗೆಳೆಯನ ಸಖ್ಯ ಮಾಡಿದ್ದಳು. ಗರ್ಭಿಣಿಯೂ ಆಗಿದ್ದಳು. ಆದರೆ ಪತ್ನಿ ಗರ್ಭಿಣಿಯಾಗಿದ್ದನ್ನು ಸಂಶಯಿಸಿದ ಗಂಡ ಆಕೆಯ ಹೊಟ್ಟೆಗೆ ಕಾಲಿನಿಂದ ಒದ್ದು ಗರ್ಭಪಾತ ಮಾಡಿಸಿದ್ದ. ಇದರಿಂದ ಸಿಟ್ಟಾದ ಪತ್ನಿ ಗೆಳೆಯನಿಂದಲೇ ಪತಿಯನ್ನು ಉಪಾಯದಿಂದ ಕೊಲ್ಲಿಸಿದ್ದಳು. ಘಟನೆ ನಡೆದು18 ತಿಂಗಳ ಬಳಿಕ ವೈಯ್ಯಾರಗಿತ್ತಿ ಸಿಕ್ಕಿಬಿದ್ದಿದ್ದಾಳೆ.
ಪತಿಯ ಕೊಲೆಗೈದು ಕೇರಳದಲ್ಲಿ ಪ್ರಿಯಕರನ ಜೊತೆ ಸಂಸಾರ ನಡೆಸಿದ್ದ ಕಿಲಾಡಿ ಲೇಡಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಣಪುರ ಗ್ರಾಮದಲ್ಲಿ ಘಟನೆ ನಡೆದಿತ್ತು. ಪತಿಯ ಕೊಲೆಗೈದ ಆರೋಪಿ ಪತ್ನಿ ಲಕ್ಷ್ಮಿ(38), ಆಕೆಯ ಪ್ರಿಯಕರ ತಿಪ್ಪೇಶ್ ನಾಯ್ಕ (42) ಹಾಗೂ ಕೊಲೆಗೆ ಸಹಾಯ ಮಾಡಿದ ಸಂತೋಷ ಅಲಿಯಾಸ್ ಡಾಂಪ (38) ಬಂಧಿತ ಆರೋಪಿಗಳು.
ಅಣಪುರ ಗ್ರಾಮದ ನಿಂಗಪ್ಪನ ಜೊತೆ ಒಂಬತ್ತು ವರ್ಷಗಳ ಹಿಂದೆ ಲಕ್ಷ್ಮೀ ವಿವಾಹವಾಗಿತ್ತು. ಮದುವೆ ಆಗಿ ಎಂಟು ವರ್ಷ ಆದ್ರೂ ಮಕ್ಕಳಾಗದಿದ್ದಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವೇಳೆ ಲಕ್ಷ್ಮಿಗೆ, ಅಡಿಕೆ ಸುಲಿಯಲು ಬರುತ್ತಿದ್ದ ಶೃಂಗಾರ ಭಾಗ್ ತಾಂಡಾ ನಿವಾಸಿ ತಿಪ್ಪೇಶ್ ನಾಯ್ಕ ಪರಿಚಯವಾಗಿದ್ದು ಸ್ನೇಹ, ಪ್ರೀತಿ, ಸಲುಗೆ ಅಂತಾ ಅನೈತಿಕ ಸಂಬಂಧಕ್ಕೆ ಒಳಗಾಗಿದ್ದರು. ಇದರ ಪರಿಣಾಮ ಲಕ್ಷ್ಮಿ ಗರ್ಭಿಣಿ ಆಗಿದ್ದಳು.
ಒಂಬತ್ತು ವರ್ಷದ ಬಳಿಕ ಪತ್ನಿ ಗರ್ಭಿಣಿ ಆಗಿದ್ದಕ್ಕೆ ಪತಿ ನಿಂಗಪ್ಪನಿಗೆ ಸಂಶಯ ಬಂದಿದ್ದು ಅನೈತಿಕ ಸಂಬಂಧದ ಶಂಕೆಯಿಂದ ಸಿಟ್ಟು ಮಾಡಿದ್ದ. ಅಲ್ಲದೆ, ಕುಡಿದು ಬಂದು ಹೊಟ್ಟೆಗೆ ಒದ್ದಿದ್ದ. ಪತಿಯ ಕಾಲಿನ ಒದೆತಕ್ಕೆ ಲಕ್ಷ್ಮೀಗೆ ಗರ್ಭಪಾತ ಆಗಿತ್ತು. ಇದರಿಂದ ಪತ್ನಿ ಸಿಟ್ಟಿಗೆದ್ದು ಪತಿಯನ್ನು ಕೊಲೆ ಮಾಡುವಂತೆ ಪ್ರಿಯಕರ ತಿಪ್ಪೇಶ್ ನಾಯ್ಕನಿಗೆ ಹೇಳಿದ್ದಳು. ನಿಂಗಪ್ಪನಿಗೆ ಪಾರ್ಟಿ ಕೊಡಿಸುವುದಾಗಿ ಹೇಳಿ ನಲ್ಲೂರ ಬಳಿ ಕಂಠಪೂರ್ತಿ ಕುಡಿಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದರು.
ಮಗ ದಿಢೀರ್ ಕಾಣೆಯಾದ ಹಿನ್ನೆಲೆ ನಿಂಗಪ್ಪನಿಗಾಗಿ ಕುಟುಂಬಸ್ಥರ ಹುಡುಕಾಡಿದ್ದು ಬಳಿಕ ತಾಯಿ ಯಲ್ಲಮ್ಮ ಚನ್ನಗಿರಿ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದಾಗಲೇ ಲಕ್ಷ್ಮಿ ನಾಪತ್ತೆಯಾಗಿದ್ದು ಪೊಲೀಸರಿಗೆ ಸಂಶಯ ಬಂದು ಹುಡುಕಾಡಿದ್ದರು. ಈ ವೇಳೆ, ಆರೋಪಿ ತಿಪ್ಪೇಶ್ ಜೊತೆಗೆ ಲಕ್ಷ್ಮಿ ಸಂಸಾರ ಮಾಡುತ್ತಿರುವುದನ್ನು ತಿಳಿದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ಆರೋಪಿಗಳು ಕೃತ್ಯ ಬಗ್ಗೆ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
In a chilling case of betrayal and murder, a woman who conspired to kill her husband after he questioned her pregnancy has been arrested 18 months after the crime. The accused, who was living with her lover in Kerala following the murder, was nabbed by Davangere police along with two accomplices.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am