ಬ್ರೇಕಿಂಗ್ ನ್ಯೂಸ್
07-07-25 10:18 pm Mangalore Correspondent ಕ್ರೈಂ
ಮಂಗಳೂರು, ಜುಲೈ 7 : ದುಬೈನ ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಇದೆಯೆಂದು ಹೇಳಿ ಮಹಿಳೆಯೊಬ್ಬಳು ಮಾಡಿದ ಫೋನ್ ಕರೆಗೆ ಮಂಗಳೂರಿನ ಯುವ ವೈದ್ಯ ಬೌಲ್ಡ್ ಆಗಿದ್ದು, ಕುಳಿತಲ್ಲೇ 4.20 ಲಕ್ಷ ರೂಪಾಯಿ ಕಳಕೊಂಡ ಬಗ್ಗೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದೆ.
ಜೂನ್ 6ರಂದು ಸಂಗೀತಾ ಎಂದು ತನ್ನನ್ನು ಪರಿಚಯಿಸಿದ್ದ ಮಹಿಳೆ ಮಂಗಳೂರಿನ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾಳೆ. ತಾನು ದುಬೈನ ಎನ್ ಎಂಸಿ ಹೆಲ್ತ್ ಸೆಂಟರಿನಲ್ಲಿದ್ದು ಇಲ್ಲಿ ಡಾಕ್ಟರ್ ಹುದ್ದೆಯೊಂದು ಖಾಲಿಯಿದ್ದು, ನೀವು ಎಪ್ಲೈ ಮಾಡಬಹುದು ಎಂದು ಹೇಳಿ ಆಫರ್ ಮಾಡಿದ್ದಳು. ಅಲ್ಲದೆ, ಹುದ್ದೆ ಖಾಲಿಯಿರುವ ಬಗ್ಗೆ ಮೈಲ್ ಸಂದೇಶ ಕಳುಹಿಸುವುದಾಗಿಯೂ ಹೇಳಿದ್ದಳು.
ಆನಂತರ, support@thejobswitch.com ಹೆಸರಿನಲ್ಲಿ ವೈದ್ಯರಿಗೆ ಮೈಲ್ ಬಂದಿದ್ದು, ಹುದ್ದೆಯ ವಿವರ, ಸ್ಯಾಲರಿ ಇತ್ಯಾದಿ ಮಾಹಿತಿಯನ್ನೂ ಕೊಡಲಾಗಿತ್ತು. ಇದರ ಬೆನ್ನಲ್ಲೇ ವಿನಯ್ ಸಿಂಗ್ ಎಂಬಾತ ವೈದ್ಯರನ್ನು ಸಂಪರ್ಕಿಸಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಖಾತ್ರಿ ಪಡಿಸುವುದಕ್ಕೆ ರಿಜಿಸ್ಟ್ರೇಶನ್ ಮಾಡುವಂತೆ ಹೇಳಿ ಅದಕ್ಕಾಗಿ 5499 ರೂ. ಕಳಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಮಂಗಳೂರಿನ ವೈದ್ಯ ಜೂನ್ 13ರಂದು ಹಣವನ್ನು ರವಾನಿಸಿದ್ದಾರೆ. ಆಮೇಲೆ ವೆರಿಫಿಕೇಶನ್, ಪ್ರೊಸೆಸ್ಸಿಂಗ್, ಲೈಸನ್ಸಿಂಗ್, ಎನ್ಓಸಿ ಇತ್ಯಾದಿ ಹೆಸರಲ್ಲಿ ಹಣವನ್ನು ಕೇಳಿದ್ದು, ವೈದ್ಯರು ದುಬೈ ಉದ್ಯೋಗ ಸಿಕ್ಕೇಬಿಡ್ತು ಎಂದುಕೊಂಡು ಹಣ ಕಳಿಸಿದ್ದರು. ಒಟ್ಟು 4,20,062 ರೂಪಾಯಿ ಹಣವನ್ನು ಅಪರಿಚಿತ ಹೇಳಿದ ಖಾತೆಗಳಿಗೆ ವರ್ಗಾಯಿಸಿದ್ದರು.
ಇಷ್ಟಾದರೂ, ಹಣದ ಬೇಡಿಕೆ ನಿಂತಿರಲಿಲ್ಲ. ಮತ್ತೆ 2.62 ಲಕ್ಷ ರೂಪಾಯಿ ಹಣವನ್ನು ಕಳಿಸುವಂತೆ ವೈದ್ಯರಿಗೆ ಸೂಚಿಸಲಾಗಿತ್ತು. ಇದರಿಂದ ಸಂಶಯಕ್ಕೀಡಾದ ವೈದ್ಯ ತನ್ನ ಗೆಳೆಯರಲ್ಲಿ ಹೇಳಿಕೊಂಡಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಜಾಬ್ ಆಫರ್ ಇರೋದು ಹೌದಾ ಎಂದು ಚೆಕ್ ಮಾಡಲು ಮುಂದಾಗಿದ್ದರು. ಚೆಕ್ ಮಾಡಿದಾಗ, ಎನ್ನೆಂಸಿ ಸಂಸ್ಥೆಯಲ್ಲಿ ಅಂತಹ ಹುದ್ದೆಯೇ ಇಲ್ಲ ಎನ್ನುವುದು ಗೊತ್ತಾಗಿದೆ. ತಾನು ಮೋಸ ಹೋದ ಅರಿವಾಗುತ್ತಿದ್ದಂತೆ ವೈದ್ಯ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಸೈಬರ್ ವಂಚಕರು ಹೀಗೂ ಮೋಸ ಮಾಡುತ್ತಾರಲ್ಲಾ ಎಂದು ಹುಬ್ಬೇರಿಸಿದ್ದಾರೆ.
In a shocking case of cyber fraud, a young doctor from Mangaluru was duped of ₹4.20 lakh after falling for a fake job offer allegedly from NMC Healthcare in Dubai. The incident has been reported at the Kankanady Town Police Station in Mangaluru.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm