ಬ್ರೇಕಿಂಗ್ ನ್ಯೂಸ್
22-12-20 06:25 pm Headline Karnataka News Network ಕ್ರೈಂ
ಹೊಸದಿಲ್ಲಿ, ಡಿ.22: ಕೆನಡಾದಲ್ಲಿ ಆಶ್ರಯ ಪಡೆಯಲು 2016ರಲ್ಲಿ ಪಾಕಿಸ್ತಾನದಿಂದ ಪಾರಾಗಿದ್ದ ಬಲೂಚ್ ಕಾರ್ಯಕರ್ತೆ ಕರಿಮಾ ಬಲೂಚ್ ಹಾರ್ಬರ್ ಫ್ರಂಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಟೊರೊಂಟೊದ ಲೇಕ್ಶೋರ್ ಬಳಿಯ ದ್ವೀಪವೊಂದರಲ್ಲಿ ಆಕೆಯ ಮೃತದೇಹ ಮುಳುಗಿರುವ ಸ್ಥಿತಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕರಿಮಾ ಅವರ ಪತಿ ಹಾಗೂ ಸಹೋದರರು ಮೃತದೇಹದ ಗುರುತನ್ನು ಪತ್ತೆ ಹಚ್ಚಿದ್ದು, ಮೃತದೇಹ ಈಗಲೂ ಪೊಲೀಸರ ಬಳಿ ಇದೆ.
ಟೊರೊಂಟೊ ಪೊಲೀಸ್ ಹಾಗೂ ಕೆನಡಾದ ಭದ್ರತಾ ಸಂಸ್ಥೆ ಸಿಎಸ್ಎಸ್ ಕರಿಮಾ ಸಾವಿನಲ್ಲಿ ಪಾಕಿಸ್ತಾನದ ಕೈವಾಡದ ಸಾಧ್ಯತೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಟೊರೊಂಟಾದ ತಾರೆಕ್ ಫತ್ಹಾ ‘ಇಂಡಿಯಾ ಟುಡೇ’ ಗೆ ತಿಳಿಸಿದ್ದಾರೆ.

ತನ್ನ ಜೀವಕ್ಕೆ ಅಪಾಯವಿದ್ದ ಕಾರಣ 2016ರಲ್ಲಿ ಕರಿಮಾ ತನ್ನ ಕೆಲವು ಸ್ನೇಹಿತರು ಹಾಗೂ ಬಲೂಚ್ ಕಾರ್ಯಕರ್ತರ ಸಹಾಯದಿಂದ ಬಲೂಚಿಸ್ತಾನದಿಂದ ತಪ್ಪಿಸಿಕೊಂಡಿದ್ದರು. ಪಾಕಿಸ್ತಾನ ಮಾಜಿ ಸೇನಾಧಿಕಾರಿಗಳು ಕೆನಡಾದಲ್ಲಿ ನೆಲೆಸಿದ್ದನ್ನು ಕರಿಮಾ ತೀವ್ರವಾಗಿ ಟೀಕಿಸುತ್ತಿದ್ದರು. ಪಾಕಿಸ್ತಾನ ವಶದಿಂದ ಬಲೂಚಿಸ್ತಾನವನ್ನು ಸ್ವತಂತ್ರಗೊಳಿಸಬೇಕೆಂದು ಪ್ರತಿಪಾದಿಸುತ್ತಿದ್ದವರಲ್ಲಿ ಕರಿಮಾ ಕೂಡ ಒಬ್ಬರಾಗಿದ್ದರು.
2016ರಲ್ಲಿ ಭಾರತದ ಪ್ರಧಾನಿ ಮೋದಿಯವರಿಗಾಗಿ ರಕ್ಷಾ ಬಂಧನ ಸಂದೇಶವನ್ನು ರೆಕಾರ್ಡ್ ಮಾಡಿದ್ದರು. 2016ರಲ್ಲಿ ಬ್ರಿಟನ್ ನ ಪ್ರಮುಖ ಪ್ರಸಾರ ಸಂಸ್ಥೆ ಬಿಬಿಸಿ ಆಯ್ಕೆ ಮಾಡಿರುವ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಕರಿಮಾ ಕೂಡ ಒಬ್ಬರಾಗಿದ್ದರು.
ಕರಿಮಾ ಬಲೂಚ್ ನಿಧನಕ್ಕೆ ಬಲೂಚ್ ರಾಷ್ಟ್ರೀಯ ಚಳುವಳಿಯು 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.
Human rights activist and former chairperson of Baloch Students Organisation – Azad, Karima Baloch was reportedly found dead in Toronto, Canada Sunday.
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm