ವೆನ್ಝ್ ಅಬ್ದುಲ್ಲಾ ಚೇತರಿಸುತ್ತಿದ್ದಂತೆ ಅಳಿಯನ ಮೇಲೆ ಅಟ್ಯಾಕ್ ; ಮಗನೆಂದು ಅಳಿಯನಿಗೆ ತಲವಾರು ಏಟು  

24-11-20 02:13 am       Mangaluru Correspondant   ಕ್ರೈಂ

ನಗರದಲ್ಲಿ ಮತ್ತೊಬ್ಬರ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.‌ ಗಾಯಾಳು ಯುವಕನನ್ನು ನೌಶಾದ್ (30) ಎಂದು ಗುರುತಿಸಲಾಗಿದೆ. ‌

ಮಂಗಳೂರು, ನವೆಂಬರ್ 23: ನಗರದಲ್ಲಿ ಮತ್ತೊಬ್ಬರ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.‌ ಯುನಿಟಿ ಆಸ್ಪತ್ರೆಯ ಬಳಿ ಘಟನೆ ನಡೆದಿದ್ದು ಗಾಯಾಳು ಯುವಕನನ್ನು ನೌಶಾದ್ (30) ಎಂದು ಗುರುತಿಸಲಾಗಿದೆ. ‌

ನೌಶಾದ್, ವಾರದ ಹಿಂದೆ ಕೈಕಂಬ ಬಳಿಯ ಕಂದಾವರ ಮಸೀದಿ ಬಳಿ ಚೂರಿ ಇರಿತಕ್ಕೆ ಒಳಗಾಗಿದ್ದ ವೆನ್ಝ್ ಅಬ್ದುಲ್ಲ ಅಜೀಜ್ ಅವರ ಅಳಿಯ ಎನ್ನಲಾಗುತ್ತಿದೆ. ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಅಜೀಜ್ ಯುನಿಟಿ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಅವರ ಮಗ ಮತ್ತು ಅಳಿಯ ನೋಡಿಕೊಳ್ಳುತ್ತಿದ್ದರು. 

ಈ ವಿಚಾರ ತಿಳಿದ ತಂಡ, ಕಾರಿನಲ್ಲಿ ಯುನಿಟಿ ಆಸ್ಪತ್ರೆಯ ಬಳಿ ಬಂದಿದ್ದು ಮಗನಿಗೆ ಹಲ್ಲೆ ನಡೆಸುವ ನಿಟ್ಟಿನಲ್ಲಿ ಹೊಂಚು ಹಾಕಿತ್ತು. ಒಂದೇ ರೀತಿಯ ಡ್ರೆಸ್ ಹಾಕಿದ್ದ ಅಳಿಯ ನೌಶಾದ್ ಆಸ್ಪತ್ರೆಯಿಂದ ಹೊರಬಂದಿದ್ದ ವೇಳೆ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಇಬ್ಬರು ತಲವಾರು ಬೀಸಿದ್ದು, ಹೊಟ್ಟೆ ಹಾಗೂ ಎದೆಗೆ ಗಂಭೀರ ಗಾಯವಾಗಿದೆ. ನೌಶಾದ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಬ್ದುಲ್ ಅಜೀಜ್ ಮೇಲೆ ಹಲ್ಲೆಗೈದಿದ್ದ ತಂಡವೇ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ.

Related News:  ಬಜ್ಪೆ ; ಬಟ್ಟೆ ವ್ಯಾಪಾರಿ ಮೇಲೆ ತಲವಾರು ದಾಳಿ !

Video: 

Man attacked by unidentified miscreates with sword near Unity hospital in Mangalore. It is said it's the same group that attacked the businessman at Kandavara, Bajpe has committed the crime. The assaulted has been identified as Noushad (30).