ಬ್ರೇಕಿಂಗ್ ನ್ಯೂಸ್
22-11-20 12:15 pm Mangalore Correspondent ಕ್ರೈಂ
ಮಂಗಳೂರು, ನವೆಂಬರ್ 22: ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯ ಭರ್ಜರಿ ಗಿಫ್ಟ್ ಆಸೆಗೆ ಒಳಗಾದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ವ್ಯಕ್ತಿಗೆ ರಿಯನಾರ್ಡೊ ನೀಲ್ ಹೆಸರಿನ ವ್ಯಕ್ತಿಯೊಬ್ಬ ಇತ್ತೀಚೆಗೆ ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಪರಿಚಯವಾಗಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಇಂಟರ್ನೆಟ್ ಮುಖಾಂತರ ಸಂಪರ್ಕದಲ್ಲಿದ್ದು ಪರಿಚಯದಿಂದ ಮಾತಾಡಿಕೊಂಡಿದ್ದ. ಆದರೆ ಕೆಲ ದಿನಗಳ ಹಿಂದೆ ಯಾವುದೋ ಕಾರಣಕ್ಕೆ ನಾನು ನಿಮಗೆ ಭರ್ಜರಿ ಗಿಫ್ಟ್ ಕಳುಹಿಸುವುದಾಗಿ ರಿಯನಾರ್ಡೊ ನೀಲ್ ಹೆಸರಿನ ಗೆಳೆಯ ತಿಳಿಸಿದ್ದ. ಆರಂಭದಲ್ಲಿ ನಿರಾಕರಿಸಿದ್ದ ವ್ಯಕ್ತಿ, ಕೊನೆಗೆ ಆತನ ಒತ್ತಾಯಕ್ಕೆ ಮಣಿದು 'ಓಕೆ' ಎಂದಿದ್ದರು.

ಅದಾದ ಕೆಲವೇ ದಿನದಲ್ಲಿ ದೆಹಲಿಯಿಂದ ಮಹಿಳೆಯೊಬ್ಬಳು ಕರೆ ಮಾಡಿದ್ದಾಳೆ. ಕೊರಿಯರ್ ಆಫೀಸ್ನಿಂದ ಕರೆ ಮಾಡಿದ್ದು , ಪಾರ್ಸೆಲ್ ಮೊತ್ತ 32,800 ರೂ. ಪಾವತಿ ಮಾಡುವಂತೆ ತಿಳಿಸಿದ್ದು ಅದನ್ನು ಪೇ ಮಾಡಿದ್ದಾರೆ. ಅದಾದ ಕೆಲವೇ ಕ್ಷಣದಲ್ಲಿ ದೆಹಲಿ ಕಸ್ಟಮ್ಸ್ ಇಲಾಖೆಯಿಂದ ಅಂತ ಹೆಸರೇಳಿಕೊಂಡು ಮತ್ತೊಬ್ಬ ಮಹಿಳೆ ಕರೆ ಮಾಡಿದ್ದು ಜಿಎಸ್ ಟಿ, ಕಸ್ಟಮ್ಸ್ ಫೀಸ್, ಇತರ ವೆಚ್ಚದ ಬಗ್ಗೆ ಮಾತನಾಡಿದ್ದಾಳೆ. ಬೇರೆ ಬೇರೆ ಖಾತೆಗಳ ವಿವರ ನೀಡಿದ್ದು ಅದಕ್ಕೆ ಹಣ ಪಾವತಿ ಮಾಡುವಂತೆ ಕೇಳಿಕೊಂಡಿದ್ದಾಳೆ. ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದ ವ್ಯಕ್ತಿ ಭಾರೀ ದೊಡ್ಡ ಗಿಫ್ಟ್ ಬರುವ ನಿರೀಕ್ಷೆಯಲ್ಲಿ ವಿವಿಧ ಖಾತೆಗಳಿಗೆ 14,91,840 ರೂ. ಜಮೆ ಮಾಡಿದ್ದಾರೆ.
ಆದರೆ, ಇದಾದ ನಂತರ ಅವರ ಸಂಪರ್ಕವೇ ಕಡಿತಗೊಂಡಿದ್ದು, ವ್ಯಕ್ತಿಗೆ ಮೋಸ ಹೋಗಿರುವ ಸಂಶಯ ಬಂದಿದೆ. ಲೆಕ್ಕ ಹಾಕಿದಾಗ ಲಕ್ಷಾಂತರ ರೂಪಾಯಿ ಕಳಕೊಂಡಿದ್ದು ಅರಿವಿಗೆ ಬಂದಿದೆ. ಇದೊಂದು ವಂಚನೆಯ ಜಾಲ ಅನ್ನೋದು ಗೊತ್ತಾಗಿ, ಇದೀಗ ಮೋಸ ಹೋದ ವ್ಯಕ್ತಿ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
Man lost Rs 14,91,840 lakh to a Facebook friend who lured him with gifts worth lakhs of rupees. A case has been registered at the cyber crime police station in Mangalore.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm