ಬ್ರೇಕಿಂಗ್ ನ್ಯೂಸ್
22-11-20 12:15 pm Mangalore Correspondent ಕ್ರೈಂ
ಮಂಗಳೂರು, ನವೆಂಬರ್ 22: ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯ ಭರ್ಜರಿ ಗಿಫ್ಟ್ ಆಸೆಗೆ ಒಳಗಾದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ವ್ಯಕ್ತಿಗೆ ರಿಯನಾರ್ಡೊ ನೀಲ್ ಹೆಸರಿನ ವ್ಯಕ್ತಿಯೊಬ್ಬ ಇತ್ತೀಚೆಗೆ ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಪರಿಚಯವಾಗಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಇಂಟರ್ನೆಟ್ ಮುಖಾಂತರ ಸಂಪರ್ಕದಲ್ಲಿದ್ದು ಪರಿಚಯದಿಂದ ಮಾತಾಡಿಕೊಂಡಿದ್ದ. ಆದರೆ ಕೆಲ ದಿನಗಳ ಹಿಂದೆ ಯಾವುದೋ ಕಾರಣಕ್ಕೆ ನಾನು ನಿಮಗೆ ಭರ್ಜರಿ ಗಿಫ್ಟ್ ಕಳುಹಿಸುವುದಾಗಿ ರಿಯನಾರ್ಡೊ ನೀಲ್ ಹೆಸರಿನ ಗೆಳೆಯ ತಿಳಿಸಿದ್ದ. ಆರಂಭದಲ್ಲಿ ನಿರಾಕರಿಸಿದ್ದ ವ್ಯಕ್ತಿ, ಕೊನೆಗೆ ಆತನ ಒತ್ತಾಯಕ್ಕೆ ಮಣಿದು 'ಓಕೆ' ಎಂದಿದ್ದರು.
ಅದಾದ ಕೆಲವೇ ದಿನದಲ್ಲಿ ದೆಹಲಿಯಿಂದ ಮಹಿಳೆಯೊಬ್ಬಳು ಕರೆ ಮಾಡಿದ್ದಾಳೆ. ಕೊರಿಯರ್ ಆಫೀಸ್ನಿಂದ ಕರೆ ಮಾಡಿದ್ದು , ಪಾರ್ಸೆಲ್ ಮೊತ್ತ 32,800 ರೂ. ಪಾವತಿ ಮಾಡುವಂತೆ ತಿಳಿಸಿದ್ದು ಅದನ್ನು ಪೇ ಮಾಡಿದ್ದಾರೆ. ಅದಾದ ಕೆಲವೇ ಕ್ಷಣದಲ್ಲಿ ದೆಹಲಿ ಕಸ್ಟಮ್ಸ್ ಇಲಾಖೆಯಿಂದ ಅಂತ ಹೆಸರೇಳಿಕೊಂಡು ಮತ್ತೊಬ್ಬ ಮಹಿಳೆ ಕರೆ ಮಾಡಿದ್ದು ಜಿಎಸ್ ಟಿ, ಕಸ್ಟಮ್ಸ್ ಫೀಸ್, ಇತರ ವೆಚ್ಚದ ಬಗ್ಗೆ ಮಾತನಾಡಿದ್ದಾಳೆ. ಬೇರೆ ಬೇರೆ ಖಾತೆಗಳ ವಿವರ ನೀಡಿದ್ದು ಅದಕ್ಕೆ ಹಣ ಪಾವತಿ ಮಾಡುವಂತೆ ಕೇಳಿಕೊಂಡಿದ್ದಾಳೆ. ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದ ವ್ಯಕ್ತಿ ಭಾರೀ ದೊಡ್ಡ ಗಿಫ್ಟ್ ಬರುವ ನಿರೀಕ್ಷೆಯಲ್ಲಿ ವಿವಿಧ ಖಾತೆಗಳಿಗೆ 14,91,840 ರೂ. ಜಮೆ ಮಾಡಿದ್ದಾರೆ.
ಆದರೆ, ಇದಾದ ನಂತರ ಅವರ ಸಂಪರ್ಕವೇ ಕಡಿತಗೊಂಡಿದ್ದು, ವ್ಯಕ್ತಿಗೆ ಮೋಸ ಹೋಗಿರುವ ಸಂಶಯ ಬಂದಿದೆ. ಲೆಕ್ಕ ಹಾಕಿದಾಗ ಲಕ್ಷಾಂತರ ರೂಪಾಯಿ ಕಳಕೊಂಡಿದ್ದು ಅರಿವಿಗೆ ಬಂದಿದೆ. ಇದೊಂದು ವಂಚನೆಯ ಜಾಲ ಅನ್ನೋದು ಗೊತ್ತಾಗಿ, ಇದೀಗ ಮೋಸ ಹೋದ ವ್ಯಕ್ತಿ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
Man lost Rs 14,91,840 lakh to a Facebook friend who lured him with gifts worth lakhs of rupees. A case has been registered at the cyber crime police station in Mangalore.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm