ಬ್ರೇಕಿಂಗ್ ನ್ಯೂಸ್
22-11-20 11:11 am Mangalore Correspondent ಕ್ರೈಂ
ಮಂಗಳೂರು, ನವೆಂಬರ್ 21 : ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಎರಡು ಲಕ್ಷ ರೂ. ಹಣ ಸಿಗುವುದೆಂದು ನಂಬಿಸಿ ಮಹಿಳೆಯ ಕರಿಮಣಿ ಸರ ಮತ್ತು 20 ಸಾವಿರ ನಗದನ್ನು ಲಪಟಾಯಿಸಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಮಹಿಳೆಯೊಬ್ಬರು ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ರೇಷನ್ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ತನ್ನನ್ನು ರಾಕೇಶ್ ಎಂದು ಪರಿಚಯಿಸಿದ್ದು ಬ್ಯಾಂಕ್ ಅಧಿಕಾರಿಯೆಂದು ಹೇಳಿಕೊಂಡಿದ್ದಾನೆ. ಕೊರೊನಾ ಕಾರಣದಿಂದ ಸರಕಾರದಿಂದ ಹಣ ಬಂದಿದೆ. ಅದಕ್ಕಾಗಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕು. ಟೆಸ್ಟಿಂಗ್ ಮಾಡಿ ರಿಪೋರ್ಟ್ ನೀಡಲು ವೈದ್ಯರಿಗೆ 20 ಸಾವಿರ ರೂ. ಕೊಡಬೇಕಾಗುತ್ತದೆ ಎಂದು ಹೇಳಿದ್ದಾನೆ. ಮಹಿಳೆಗೆ ನಂಬಿಕೆ ಬರಲು ತೊಕ್ಕೊಟ್ಟಿನಲ್ಲಿ ಆಸ್ಪತ್ರೆಗೂ ಕರೆದೊಯ್ದಿದ್ದಾನೆ. ಆದರೆ, ಆಸ್ಪತ್ರೆಯ ಹೊರಗೆ ನಿಂತು ಇಲ್ಲಿ ಟೆಸ್ಟ್ ಮಾಡಿ ಓಕೆ ಆದರೆ ಎರಡು ಲಕ್ಷ ಸಿಗುತ್ತೆ ಅಂತ ನಂಬಿಸಿದ್ದಾನೆ.
ಕೊನೆಗೆ, ಮಹಿಳೆಯು ತನ್ನಲ್ಲಿರುವ ಕರಿಮಣಿ ಸರವನ್ನು ಒಮ್ಮೆಗೆ ಅಡ ಇಟ್ಟು ಹಣ ತರುವ ಉಪಾಯ ಹೇಳಿದ್ದಾನೆ. ಮಹಿಳೆ ಅದಕ್ಕೆ ಒಪ್ಪಿದ್ದಲ್ಲದೆ, ಸರವನ್ನು ತೆಗೆದು ಯುವಕನ ಕೈಗೆ ಕೊಟ್ಟಿದ್ದಾರೆ. ಈ ವೇಳೆ, ನಿಮ್ಮ ಕುತ್ತಿಗೆ ಖಾಲಿಯಾಗುವುದು ಬೇಡ, ಇದು ತನ್ನ ತಾಯಿಯ ಸರವೆಂದು ಹೇಳಿ ಬೇರೊಂದು ಸರವನ್ನು ಮಹಿಳೆಯ ಕೈಗಿತ್ತಿದ್ದಾನೆ. ಮಹಿಳೆಯ ನಂಬಿಕೆ ಗಳಿಸಲು ನಕಲಿ ಸರವನ್ನು ಕೊಟ್ಟು ಆಕೆಯ ಚಿನ್ನದ ಸರ ಪಡೆದು ಆಸ್ಪತ್ರೆಯ ಒಳ ಹೋದವ ಮತ್ತೆ ಬರಲಿಲ್ಲ. ಅಲ್ಲಿಂದಲೇ ಪರಾರಿಯಾಗಿದ್ದಾನೆ. ಮಹಿಳೆ ಕಾದು ಸುಸ್ತಾಗಿ ಆಸ್ಪತ್ರೆಯ ಸಿಬಂದಿ ಬಳಿ ವಿಚಾರಿಸಿದಾಗ ತಾನು ಮೋಸ ಹೋಗಿದ್ದು ಅರಿವಾಗಿದೆ. ಅಲ್ಲದೆ, ಆತ ನೀಡಿದ್ದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಮಹಿಳೆ ಬಳಿಕ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಎರಡು ಲಕ್ಷ ರೂ. ಹಣ ಸಿಗುವುದೆಂದು ನಂಬಿಸಿ ಮಹಿಳೆಯ ಕರಿಮಣಿ ಸರ ಮತ್ತು 20 ಸಾವಿರ ನಗದನ್ನು ಲಪಟಾಯಿಸಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಮಹಿಳೆಯೊಬ್ಬರು ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ರೇಷನ್ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ತನ್ನನ್ನು ರಾಕೇಶ್ ಎಂದು ಪರಿಚಯಿಸಿದ್ದು ಬ್ಯಾಂಕ್ ಅಧಿಕಾರಿಯೆಂದು ಹೇಳಿಕೊಂಡಿದ್ದಾನೆ. ಕೊರೊನಾ ಕಾರಣದಿಂದ ಸರಕಾರದಿಂದ ಹಣ ಬಂದಿದೆ. ಅದಕ್ಕಾಗಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕು. ಟೆಸ್ಟಿಂಗ್ ಮಾಡಿ ರಿಪೋರ್ಟ್ ನೀಡಲು ವೈದ್ಯರಿಗೆ 20 ಸಾವಿರ ರೂ. ಕೊಡಬೇಕಾಗುತ್ತದೆ ಎಂದು ಹೇಳಿದ್ದಾನೆ. ಮಹಿಳೆಗೆ ನಂಬಿಕೆ ಬರಲು ತೊಕ್ಕೊಟ್ಟಿನಲ್ಲಿ ಆಸ್ಪತ್ರೆಗೂ ಕರೆದೊಯ್ದಿದ್ದಾನೆ. ಆದರೆ, ಆಸ್ಪತ್ರೆಯ ಹೊರಗೆ ನಿಂತು ಇಲ್ಲಿ ಟೆಸ್ಟ್ ಮಾಡಿ ಓಕೆ ಆದರೆ ಎರಡು ಲಕ್ಷ ಸಿಗುತ್ತೆ ಅಂತ ನಂಬಿಸಿದ್ದಾನೆ.
ಕೊನೆಗೆ, ಮಹಿಳೆಯು ತನ್ನಲ್ಲಿರುವ ಕರಿಮಣಿ ಸರವನ್ನು ಒಮ್ಮೆಗೆ ಅಡ ಇಟ್ಟು ಹಣ ತರುವ ಉಪಾಯ ಹೇಳಿದ್ದಾನೆ. ಮಹಿಳೆ ಅದಕ್ಕೆ ಒಪ್ಪಿದ್ದಲ್ಲದೆ, ಸರವನ್ನು ತೆಗೆದು ಯುವಕನ ಕೈಗೆ ಕೊಟ್ಟಿದ್ದಾರೆ. ಈ ವೇಳೆ, ನಿಮ್ಮ ಕುತ್ತಿಗೆ ಖಾಲಿಯಾಗುವುದು ಬೇಡ, ಇದು ತನ್ನ ತಾಯಿಯ ಸರವೆಂದು ಹೇಳಿ ಬೇರೊಂದು ಸರವನ್ನು ಮಹಿಳೆಯ ಕೈಗಿತ್ತಿದ್ದಾನೆ. ಮಹಿಳೆಯ ನಂಬಿಕೆ ಗಳಿಸಲು ನಕಲಿ ಸರವನ್ನು ಕೊಟ್ಟು ಆಕೆಯ ಚಿನ್ನದ ಸರ ಪಡೆದು ಆಸ್ಪತ್ರೆಯ ಒಳ ಹೋದವ ಮತ್ತೆ ಬರಲಿಲ್ಲ. ಅಲ್ಲಿಂದಲೇ ಪರಾರಿಯಾಗಿದ್ದಾನೆ. ಮಹಿಳೆ ಕಾದು ಸುಸ್ತಾಗಿ ಆಸ್ಪತ್ರೆಯ ಸಿಬಂದಿ ಬಳಿ ವಿಚಾರಿಸಿದಾಗ ತಾನು ಮೋಸ ಹೋಗಿದ್ದು ಅರಿವಾಗಿದೆ. ಅಲ್ಲದೆ, ಆತ ನೀಡಿದ್ದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಮಹಿಳೆ ಬಳಿಕ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
A case was filed at Ullal police station after a woman lost her mangal sutra worth Rs 60,000 and cash Rs 20,000. The woman was duped by a man who assured her that hospitals are providing money for corona.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm