ಬ್ರೇಕಿಂಗ್ ನ್ಯೂಸ್
13-11-20 04:56 pm Mangalore Correspondent ಕ್ರೈಂ
ಪುತ್ತೂರು, ನವೆಂಬರ್ 13: ಮುಸ್ಲಿಂ ಯುವಕನೊಬ್ಬ ಹಿಂದು ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಯುವತಿಯ ಸ್ನೇಹ ಸಂಪಾದಿಸಿ ಆಕೆಯೊಂದಿಗೆ ಧರ್ಮಸ್ಥಳ ಸೇರಿ ಸುತ್ತಾಡಿ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕಡಬ ತಾಲೂಕು ಮರ್ದಾಳ ಗ್ರಾಮದ ಪಾಲೆತ್ತಡ್ಕ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಪುತ್ರ ಅಬ್ದುಲ್ ರಜಾಕ್ ಎಂಬಾತ ತನ್ನ ಹೆಸರು ಬದಲಾಯಿಸಿ ಕೌಶಿಕ್ ಯಾನೆ ಸಂಜು ಎಂಬ ಹೆಸರಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ. ಅಲ್ಲದೆ, ತನಗೆ ತಂದೆ, ತಾಯಿ ಇಲ್ಲದಿದ್ದು, ಯಾರಾದ್ರೂ ಗೆಳಯರಾಗುವವರು ಫ್ರೆಂಡ್ ರಿಕ್ವೆಸ್ಟ್ ಕಳಿಸುವಂತೆ ಕೇಳಿಕೊಂಡಿದ್ದ. ಅಲ್ಲದೆ, 20ರಿಂದ 25 ವರ್ಷದ ಒಳಗಿನ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟನ್ನೂ ಕಳಿಸಿದ್ದ. ಈ ವೇಳೆ, ಕೌಕ್ರಾಡಿ ಗ್ರಾಮದ 24ರ ಹರೆಯದ ಯುವತಿಯೊಬ್ಬಳು ಕನೆಕ್ಟ್ ಆಗಿದ್ದು, ವಾಟ್ಸಪ್ ನಂಬರ್ ಪಡೆದು ಇಬ್ಬರೂ ಚಾಟಿಂಗ್ ಆರಂಭಿಸಿದ್ದರು. ಆನಂತರ ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ಯುವತಿಯೂ ಹುಚ್ಚು ಮಾತಿಗೆ ಮರುಳಾಗಿದ್ದಾಳೆ.



ಇತ್ತೀಚೆಗೆ ನವೆಂಬರ್ 1ರಂದು ಹುಡುಗಿ ತನ್ನ ಹೆತ್ತವರ ಸಮ್ಮತಿ ಪಡೆದು, ಆತನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆತುಂಬ ಕುಂಕುಮ ಪ್ರಸಾದ ಹಾಕ್ಕೊಂಡಿದ್ದ ಕೌಶಿಕ್ ಯಾನೆ ಅಬ್ದುಲ್ಲ ಹುಡುಗಿ ಜೊತೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದ. ಬಳಿಕ ಈ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕ್ಕೊಂಡಿದ್ದಲ್ಲದೆ, ತಾನು ಅಪ್ಪಟ ಹಿಂದು ಎನ್ನುವಂತೆ ಹುಡುಗಿ ಮುಂದೆ ನಿರೂಪಿಸಲು ಹೋಗಿದ್ದಾನೆ. ಆದರೆ, ಫೇಸ್ಬುಕ್ ನಲ್ಲಿ ಹೀಗೆ ನಾಮ ಹಾಕ್ಕೊಂಡು ಫೋಟೋ ಹಾಕಿದ್ದನ್ನು ಗಮನಿಸಿದ ಆತನ ಮುಸ್ಲಿಂ ಸಮುದಾಯದ ಯುವಕರು ಆಕ್ಷೇಪಿಸಿದ್ದಾರೆ. ಈ ವೇಳೆ, ಅಬ್ದುಲ್ ರಜಾಕನ ವಾಸ್ತವ ಹೊರಗೆ ಬಂದಿದ್ದು ಹುಡುಗಿಯೂ ತಾನು ಮೋಸ ಹೋಗಿರುವುದನ್ನು ಅರಿತಿದ್ದಾಳೆ.
ಮನೆಯಲ್ಲಿ ಹೊಸ ಹುಡುಗ ಸಂಪರ್ಕ ಆಗಿದ್ದನ್ನು ಹೇಳಿಕೊಂಡು ತಿರುಗಿದ್ದ ಹುಡುಗಿಗೆ ಮುಸ್ಲಿಂ ಹುಡುಗನ ನಾಟಕ ಅರಿವಾಗಿದ್ದು, ಸುಳ್ಳು ಹೇಳಿ ವಂಚಿಸಿರುವ ವಿಚಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪುತ್ತೂರು ಭಾಗದಲ್ಲಿ ಈ ವಿಚಾರ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಕೂಡ ಲವ್ ಜಿಹಾದಿ ಕೃತ್ಯದ ಒಂದು ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಅಬ್ದುಲ್ ರಜಾಕ್ ಫೇಸ್ಬುಕ್ ನಲ್ಲಿ ಇನ್ನೂ ಹಲವು ಖಾತೆಗಳನ್ನು ಹೊಂದಿರುವುದು ಬಹಿರಂಗವಾಗಿದ್ದು, ಕನಕರಾಜು ಹೆಸರಲ್ಲಿ ಅಕೌಂಟ್ ಹೊಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹುಡುಗ- ಹುಡುಗಿ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.
Puttur Muslim Boy Fakes himself as Hindu to win the heart of Girl on Facebook for Marriage. Later he was exposed and a case has been registered in Uppinangady Police Station. The boy is identified as Abdul Razak (25), son of Sheikh Ismail, resident of Palathadka House in Mardhala, Bantra village, Kadaba taluk
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm