ಬ್ರೇಕಿಂಗ್ ನ್ಯೂಸ್
09-11-20 09:25 pm Mangaluru Correspondent ಕ್ರೈಂ
ಮಂಗಳೂರು, ನವೆಂಬರ್ 9: ಕಾವೂರಿನ ಮಲ್ಲಿ ಲೇಔಟ್ ನಲ್ಲಿ ನ.3ರಂದು ಹಾಡಹಗಲೇ ನಡೆದಿದ್ದ ಕೇರಳ ಮೂಲದ ವ್ಯಕ್ತಿಯ ಬರ್ಬರ ಕೊಲೆ ಪ್ರಕರಣವನ್ನು ಕಾವೂರು ಪೊಲೀಸರು ಭೇದಿಸಿದ್ದಾರೆ.
ಪ್ರಕರಣ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ಸಂತೋಷ್ (43) ಮತ್ತು ಗದಗ ಮೂಲದ ಬೈಕಂಪಾಡಿಯ ಅಂಗಾರಗುಂಡಿ ನಿವಾಸಿ ಸಿದ್ದಪ್ಪ (36) ಬಂಧಿತರು.
ಆರೋಪಿ ಸಂತೋಷ್, ಈ ಹಿಂದೆ ಮೃತ ಸುರೇಂದ್ರನ್ ಮನೆಯಲ್ಲಿ ಅಲ್ಯುಮಿನಿಯಮ್ ಫ್ಯಾಬ್ರಿಕೇಶನ್ ಕೆಲಸ ಮಾಡಿದ್ದು ಅದರಲ್ಲಿ ಹಣ ಪಡೆಯಲು ಬಾಕಿ ಇತ್ತು. ಹಣ ನೀಡದ ದ್ವೇಷ ಇದ್ದುದರಿಂದ ಸಂತೋಷ್, ಸಿದ್ದಪ್ಪನ ಜೊತೆ ಸೇರಿ ನ.3ರಂದು ಕೆಲಸ ಕೇಳುವ ನೆಪದಲ್ಲಿ ಸುರೇಂದ್ರನ್ ಮನೆಗೆ ಬಂದಿದ್ದ. ಸುರೇಂದ್ರನ್ ಮನೆಯಲ್ಲಿ ಹಣ, ಚಿನ್ನ ಸಿಗಬಹುದೆಂದು ಒಬ್ಬಂಟಿಯಾಗಿದ್ದ ಅವರನ್ನು ಬ್ಲೇಡ್ ಕಟರ್ ಮೂಲಕ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದರು. ಆಬಳಿಕ ಮನೆಯಲ್ಲಿ ಸಿಕ್ಕಿದ್ದ ಸ್ವಲ್ಪ ಹಣದೊಂದಿಗೆ ಮನೆಯಿಂದ ಪರಾರಿಯಾಗಿದ್ದರು.
ಕೊಲೆ ಘಟನೆ ಸಂಜೆ ಹೊತ್ತಿಗೆ ಸುರೇಂದ್ರನ್ ಪತ್ನಿ ಮನೆಗೆ ಆಗಮಿಸಿದಾಗ, ಬಯಲಾಗಿತ್ತು. ಮನೆಯ ಒಳಗೆ ರಕ್ತದ ಮಡುವಲ್ಲಿ ಸುರೇಂದ್ರನ್ ಕೊಲೆಯಾಗಿ ಬಿದ್ದಿದ್ದರು. ಪ್ರಕರಣದ ತನಿಖೆಗಾಗಿ ಕಾವೂರು ಠಾಣೆ ಪೊಲೀಸರ ಜೊತೆ ಸಿಸಿಬಿ ಘಟಕ ಮತ್ತು ತಾಂತ್ರಿಕ ತಜ್ಞರ ಜೊತೆ ಮೂರು ತಂಡಗಳಲ್ಲಾಗಿ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರು ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕಿ ಶಂಕೆ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
ಸುರೇಂದ್ರನ್ ಸಾಕಷ್ಟು ಸ್ಥಿತಿವಂತರಾಗಿದ್ದು ಕೇರಳ ಮತ್ತು ಮಂಗಳೂರಿನಲ್ಲಿ ವಹಿವಾಟು ಹೊಂದಿದ್ದರು. ಪ್ರಕರಣದಲ್ಲಿ ಬೇರೇನಾದ್ರೂ ಕೈವಾಡ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿದೆ.
ಇದನ್ನೂ ಓದಿ: ಕಾವೂರು ; ಕೇರಳ ಮೂಲದ ಉದ್ಯಮಿಯ ಮನೆಯಲ್ಲೇ ಇರಿದು ಕೊಲೆ !!
In connection to the murder of Kerala Businessman in Kavoor, the police have succeeded in arresting two persons. A Kerala native operating his business in the city here was hacked to death in broad daylight. The incident happened in Kavoor on Tuesday, November 3.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm