ಬ್ರೇಕಿಂಗ್ ನ್ಯೂಸ್
30-07-23 09:20 pm Mangalore Correspondent ಕ್ರೈಂ
ಉಳ್ಳಾಲ, ಜು.30: ಮಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಒಂದು ತೊಕ್ಕೊಟ್ಟಿನಲ್ಲಿ ಪತ್ತೆಯಾಗಿದ್ದು ಬೈಕನ್ನ ಚಲಾಯಿಸುತ್ತಿದ್ದ ಕಳ್ಳ ಸಿಸಿಟಿವಿ ಫೂಟೇಜಲ್ಲಿ ಸೆರೆಯಾಗಿದ್ದಾನೆ. ಅಷ್ಟಕ್ಕೂ ಮಾರ್ಕೆಟಲ್ಲಿ ಮೌಲ್ಯವಿಲ್ಲದ ಬೈಕ್ ಗಳನ್ನ ಕದಿಯೋ ಖದೀಮರು ಕದ್ದ ಬೈಕ್ ನಂಬರ್ ಪ್ಲೇಟ್ ಕಳಚಿ ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದೆ.
ಕೊಲ್ಯ ಸಾರಸ್ವತ ಕಾಲನಿಯ ಸಂಜಯ್(23) ಎಂಬವರು ಚಲಾಯಿಸುತ್ತಿದ್ದ ಬೈಕ್ ಕಳೆದ ಜುಲೈ 20 ರಂದು ಮಂಗಳೂರಿನಲ್ಲಿ ಕಳವಾಗಿದ್ದು ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 20 ರಂದು ಸಂಜಯ್ ತನ್ನ ಸ್ನೇಹಿತ ಶ್ರವಣ್ ಅವರ ತಂದೆಯ ಹೀರೋ ಹೋಂಡಾ ಫ್ಯಾಷನ್ ಪ್ರೋ ಬೈಕಲ್ಲಿ ಶ್ರವಣ್ ಗೆ ನೂತನ ಉದ್ಯೋಗಕ್ಕೆ ಸೇರಿಸಲೆಂದು ತೆರಳಿದ್ದರು. ಶರವು ದೇವಸ್ಥಾನದ ಬಳಿಯ ಎಕ್ಸೆಲ್ ಮಿಸ್ ಚೀಫ್ ಮಾಲ್ ಬಳಿಯಲ್ಲಿ ಸಂಜೆ 5 ಗಂಟೆಗೆ ಬೈಕನ್ನ ಪಾರ್ಕ್ ಮಾಡಿ ಪಕ್ಕದ ಕಂಪನಿಯೊಂದಕ್ಕೆ ಕೆಲಸ ಕೇಳಲೆಂದು ತೆರಳಿದ್ದರು. ಸಂಜಯ್ ಮತ್ತು ಶ್ರವಣ್ ಕಂಪನಿಯಿಂದ ಮರಳಿದಾಗ ಪಾರ್ಕ್ ಮಾಡಲಾಗಿದ್ದ ಬೈಕ್ ನಾಪತ್ತೆಯಾಗಿತ್ತು. ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರ ತಿಳಿಸಿ ಹುಡುಕಾಡಿದರೂ ಬೈಕ್ ಸಿಗದೆ ಇದ್ದ ಕಾರಣ ಜುಲೈ 26 ರಂದು ಸಂಜಯ್ ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಸಂಜೆ ತೊಕ್ಕೊಟ್ಟಿನ ಒಳ ಪೇಟೆಯ ಆಮಂತ್ರಣ ಸಭಾಂಗಣದ ಎದುರು ಭಾಗದ ಮೆಡಿಕಲ್ ಸೆಂಟರ್ ಎದುರುಗಡೆ ಕಳವಾದ ಬೈಕ್ ಪತ್ತೆಯಾಗಿದೆ. ಅಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಮಧ್ಯಾಹ್ನದ ವೇಳೆ ಬೈಕನ್ನ ಓರ್ವನು ಅಲ್ಲಿ ತಂದು ನಿಲ್ಲಿಸಿದ್ದು ಆತನನ್ನ ಮತ್ತೋರ್ವ ಸ್ವಾಗತಿಸಿ ಮಾತನಾಡಿಸಿದ ದೃಶ್ಯ ದಾಖಲಾಗಿದೆ. ಬೈಕ್ನ ನಂಬರ್ ಪ್ಲೇಟನ್ನ ಕಳಚಲಾಗಿದೆ, ಅಷ್ಟಕ್ಕೂ 18 ಸಾವಿರ ಮಾರ್ಕೆಟ್ ಮೌಲ್ಯದ ಬೈಕ್ ಕಾಳ ಧಂದೆಯಲ್ಲಿ ಮಾರಿದರೂ 8 ಸಾವಿರಕ್ಕಿಂತ ಹೆಚ್ಚು ಮೌಲ್ಯ ಸಿಗಲು ಕಷ್ಟ. ಕದ್ದ ಬೈಕ್ ಗಳನ್ನ ಖದೀಮರು ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದ್ದು, ಪೊಲೀಸರು ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶ್ರವಣ್ ತಂದೆ ಸಂದೀಪ್ ಅವರು ಬೈಕ್ ಗುರುತು ಪತ್ತೆಹಚ್ಚಿದ್ದು , ಬಂದರು ಠಾಣೆ ಪೊಲೀಸರು ಬೈಕನ್ನ ವಶಕ್ಕೆ ಪಡೆದಿದ್ದಾರೆ.
Bike stolen from Mangalore found in Thokottu, video of CCTV found.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm