ಬ್ರೇಕಿಂಗ್ ನ್ಯೂಸ್
30-07-23 09:20 pm Mangalore Correspondent ಕ್ರೈಂ
ಉಳ್ಳಾಲ, ಜು.30: ಮಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಒಂದು ತೊಕ್ಕೊಟ್ಟಿನಲ್ಲಿ ಪತ್ತೆಯಾಗಿದ್ದು ಬೈಕನ್ನ ಚಲಾಯಿಸುತ್ತಿದ್ದ ಕಳ್ಳ ಸಿಸಿಟಿವಿ ಫೂಟೇಜಲ್ಲಿ ಸೆರೆಯಾಗಿದ್ದಾನೆ. ಅಷ್ಟಕ್ಕೂ ಮಾರ್ಕೆಟಲ್ಲಿ ಮೌಲ್ಯವಿಲ್ಲದ ಬೈಕ್ ಗಳನ್ನ ಕದಿಯೋ ಖದೀಮರು ಕದ್ದ ಬೈಕ್ ನಂಬರ್ ಪ್ಲೇಟ್ ಕಳಚಿ ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದೆ.
ಕೊಲ್ಯ ಸಾರಸ್ವತ ಕಾಲನಿಯ ಸಂಜಯ್(23) ಎಂಬವರು ಚಲಾಯಿಸುತ್ತಿದ್ದ ಬೈಕ್ ಕಳೆದ ಜುಲೈ 20 ರಂದು ಮಂಗಳೂರಿನಲ್ಲಿ ಕಳವಾಗಿದ್ದು ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 20 ರಂದು ಸಂಜಯ್ ತನ್ನ ಸ್ನೇಹಿತ ಶ್ರವಣ್ ಅವರ ತಂದೆಯ ಹೀರೋ ಹೋಂಡಾ ಫ್ಯಾಷನ್ ಪ್ರೋ ಬೈಕಲ್ಲಿ ಶ್ರವಣ್ ಗೆ ನೂತನ ಉದ್ಯೋಗಕ್ಕೆ ಸೇರಿಸಲೆಂದು ತೆರಳಿದ್ದರು. ಶರವು ದೇವಸ್ಥಾನದ ಬಳಿಯ ಎಕ್ಸೆಲ್ ಮಿಸ್ ಚೀಫ್ ಮಾಲ್ ಬಳಿಯಲ್ಲಿ ಸಂಜೆ 5 ಗಂಟೆಗೆ ಬೈಕನ್ನ ಪಾರ್ಕ್ ಮಾಡಿ ಪಕ್ಕದ ಕಂಪನಿಯೊಂದಕ್ಕೆ ಕೆಲಸ ಕೇಳಲೆಂದು ತೆರಳಿದ್ದರು. ಸಂಜಯ್ ಮತ್ತು ಶ್ರವಣ್ ಕಂಪನಿಯಿಂದ ಮರಳಿದಾಗ ಪಾರ್ಕ್ ಮಾಡಲಾಗಿದ್ದ ಬೈಕ್ ನಾಪತ್ತೆಯಾಗಿತ್ತು. ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರ ತಿಳಿಸಿ ಹುಡುಕಾಡಿದರೂ ಬೈಕ್ ಸಿಗದೆ ಇದ್ದ ಕಾರಣ ಜುಲೈ 26 ರಂದು ಸಂಜಯ್ ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಸಂಜೆ ತೊಕ್ಕೊಟ್ಟಿನ ಒಳ ಪೇಟೆಯ ಆಮಂತ್ರಣ ಸಭಾಂಗಣದ ಎದುರು ಭಾಗದ ಮೆಡಿಕಲ್ ಸೆಂಟರ್ ಎದುರುಗಡೆ ಕಳವಾದ ಬೈಕ್ ಪತ್ತೆಯಾಗಿದೆ. ಅಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಮಧ್ಯಾಹ್ನದ ವೇಳೆ ಬೈಕನ್ನ ಓರ್ವನು ಅಲ್ಲಿ ತಂದು ನಿಲ್ಲಿಸಿದ್ದು ಆತನನ್ನ ಮತ್ತೋರ್ವ ಸ್ವಾಗತಿಸಿ ಮಾತನಾಡಿಸಿದ ದೃಶ್ಯ ದಾಖಲಾಗಿದೆ. ಬೈಕ್ನ ನಂಬರ್ ಪ್ಲೇಟನ್ನ ಕಳಚಲಾಗಿದೆ, ಅಷ್ಟಕ್ಕೂ 18 ಸಾವಿರ ಮಾರ್ಕೆಟ್ ಮೌಲ್ಯದ ಬೈಕ್ ಕಾಳ ಧಂದೆಯಲ್ಲಿ ಮಾರಿದರೂ 8 ಸಾವಿರಕ್ಕಿಂತ ಹೆಚ್ಚು ಮೌಲ್ಯ ಸಿಗಲು ಕಷ್ಟ. ಕದ್ದ ಬೈಕ್ ಗಳನ್ನ ಖದೀಮರು ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದ್ದು, ಪೊಲೀಸರು ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶ್ರವಣ್ ತಂದೆ ಸಂದೀಪ್ ಅವರು ಬೈಕ್ ಗುರುತು ಪತ್ತೆಹಚ್ಚಿದ್ದು , ಬಂದರು ಠಾಣೆ ಪೊಲೀಸರು ಬೈಕನ್ನ ವಶಕ್ಕೆ ಪಡೆದಿದ್ದಾರೆ.
Bike stolen from Mangalore found in Thokottu, video of CCTV found.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 11:22 am
HK News Staffer
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm