ಬ್ರೇಕಿಂಗ್ ನ್ಯೂಸ್
06-06-23 10:43 am Mangalore Correspondent ಕ್ರೈಂ
ಉಳ್ಳಾಲ, ಜೂ.6: ಕುತ್ತಾರು ಬಳಿಯ ಭಂಡಾರ ಬೈಲು ಎಂಬಲ್ಲಿ ಟಾಟಾ ಏಸ್ ವಾಹನದಲ್ಲಿ ಜಾನುವಾರುಗಳನ್ನ ಉಸಿರುಗಟ್ಟಿಸಿ ಅಮಾನವೀಯವಾಗಿ ವಧಾಗೃಹಕ್ಕೆ ಸಾಗಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಜಾನುವಾರುಗಳನ್ನ ರಕ್ಷಿಸಿದ್ದು ಈ ವೇಳೆ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಳ್ಳಾಲದ ಆಝಾದ್ ನಗರ ನಿವಾಸಿ ಅಹಮ್ಮದ್ ಇರ್ಷಾದ್, ಅಳೇಕಳ ನಿವಾಸಿ ಜಾಫರ್ ಸಾಧಿಕ್, ಬಸ್ತಿಪಡ್ಪು ನಿವಾಸಿ ಫಾಯಝ್, ಮಂಜೇಶ್ವರ ಬಂಗ್ರ ನಿವಾಸಿ ಖಾಲಿದ್ ಬಿ.ಎಮ್ ಬಂಧಿತ ಆರೋಪಿಗಳು.
ಆರೋಪಿಗಳು ಆದಿತ್ಯವಾರ ಅಂಬ್ಲಮೊಗರು ಎಂಬಲ್ಲಿನ ವೃದ್ಧೆಯೊಬ್ಬರಿಂದ 5 ಜಾನುವಾರುಗಳನ್ನ ಖರೀದಿಸಿ ಕೇರಳ ನೋಂದಣಿಯ ಟಾಟಾ ಏಸ್ ವಾಹನದಲ್ಲಿ ಅಮಾನವೀಯವಾಗಿ ತುಂಬಿಸಿ ಭಂಡಾರ ಬೈಲು ಮಾರ್ಗವಾಗಿ ಉಳ್ಳಾಲ ಅಲೇಕಳದ ವಧಾಗೃಹಕ್ಕೆ ಸಾಗಿಸುತ್ತಿದ್ದ ವೇಳೆ ಕಡಿದಾದ ರಸ್ತೆ ಏರನ್ನ ಏರಲಾಗದೆ ವಾಹನ ನಿಂತಿತ್ತು. ಈ ವೇಳೆ ಸ್ಥಳದಲ್ಲಿದ್ದ ಬಜರಂಗದಳದ ಹುಡುಗರು ವಾಹನವನ್ನ ತಳ್ಳಲು ಮುಂದಾದಾಗ ಗೋವುಗಳನ್ನ ಅಮಾನವೀಯವಾಗಿ ತುಂಬಿಸಿದ್ದು ಬೆಳಕಿಗೆ ಬಂದು ಚಾಲಕನಲ್ಲಿ ವಿಚಾರಿಸಿದಾಗ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದರು. ಎಸ್ಕಾರ್ಟ್ ನೀಡುತ್ತಿದ್ದ ಇಬ್ಬರು ಆರೋಪಿಗಳು ಬೈಕನ್ನ ಬಿಟ್ಟು ಓಡಿ ಹೋಗಿದ್ದರು.
ಈ ವೇಳೆ, ವಾಹನದಲ್ಲಿದ್ದ ಒಂದು ಹಸು ಹೊರಗೆ ಓಡಿ ತಪ್ಪಿಸಿತ್ತು. ಬಾಕಿ ಉಳಿದಿದ್ದ ಒಂದು ಹಸು, ಎರಡು ಹೋರಿ, ಮತ್ತೊಂದು ಕರುವನ್ನ ರಕ್ಷಿಸಿದ ಬಜರಂಗದಳದ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಒಪ್ಪಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಹಿಂಸೆ ಕಾಯ್ದೆ, ಐಪಿಸಿ 379 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Illegal cow transport at Kuthar, four arrested by Ullal Police in Mangalore. The arrested were caught by the bajarang dal members when the van was stuck finding difficult to climb up the road.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 03:02 pm
HK News Desk
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm