ಬ್ರೇಕಿಂಗ್ ನ್ಯೂಸ್
26-10-20 07:34 pm Mangalore Reporter ಕ್ರೈಂ
ಮಂಗಳೂರು, ಅಕ್ಟೋಬರ್ 26: ತುಳು ಚಿತ್ರನಟ, ಫೈನಾನ್ಸ್ ಮಾಡಿಕೊಂಡಿದ್ದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ತಿರುವು ಸಿಕ್ಕಿದೆ. ಕೊಲೆಯಾದ ದಿವಸ ಆತ ಉಳಿದುಕೊಂಡಿದ್ದ ಭಂಡಾರಿಬೆಟ್ಟಿನ ಫ್ಲ್ಯಾಟ್ ನಲ್ಲಿ ಒಂದು ಕೋಟಿ ರೂಪಾಯಿ ನಗದು ಇತ್ತು. ಅಲ್ಲದೆ, ಸುರೇಂದ್ರನ ಮೈಯಲ್ಲಿ ಒಂದು ಕೇಜಿಯಷ್ಟು ಬಂಗಾರ ಇತ್ತು. ಕೊಲೆಯ ಬಳಿಕ ಹಣ ಮತ್ತು ಬಂಗಾರ ನಾಪತ್ತೆಯಾಗಿದ್ದು ಕೊಲೆ ಆರೋಪಿಗಳೇ ಕದ್ದಿರಬೇಕೆಂದು ಶಂಕಿಸಿ ಸುರೇಂದ್ರ ಬಂಟ್ವಾಳ್ ತಾಯಿ ರಾಧಾ ಮತ್ತು ತಮ್ಮ ಚಂದ್ರಹಾಸ್ ಎಸ್ಪಿಗೆ ದೂರು ನೀಡಿದ್ದಾರೆ.
ಬಂಟ್ವಾಳ ಪೊಲೀಸರು ಎಫ್ಐಆರ್ ನಲ್ಲಿ ನಗದು ಮತ್ತು ಬಂಗಾರ ನಾಪತ್ತೆಯಾಗಿರುವ ವಿಚಾರವನ್ನು ಸೇರಿಸಿಲ್ಲ. ಈ ಬಗ್ಗೆ ಪೊಲೀಸರಿಗೆ ನಾವು ಮನವಿ ಮಾಡಿದ್ದರೂ, ಎಫ್ಐಆರ್ ನಲ್ಲಿ ಸೇರಿಸಿಕೊಂಡಿಲ್ಲ. ಇದರ ಬಗ್ಗೆ ಎಸ್ಪಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾಗಿ ಸುರೇಂದ್ರನ ತಾಯಿ ರಾಧಾ ತಿಳಿಸಿದ್ದಾರೆ.
ಅಲ್ಲದೆ, ಸತೀಶ್ ಕುಲಾಲ್ ಒಬ್ಬನೇ ಈ ಕೃತ್ಯ ಮಾಡಿಲ್ಲ. ಇದರ ಹಿಂದೆ ಪ್ರಭಾವಿಗಳು ಬಹಳಷ್ಟು ಮಂದಿ ಇದ್ದಾರೆ. ಕೊಲೆಯ ಬಳಿಕ ಚಿನ್ನ ಮತ್ತು ನಗದನ್ನು ಕದ್ದುಕೊಂಡು ಹೋಗಿದ್ದಾರೆ. ಫ್ಲ್ಯಾಟಿನಲ್ಲಿ ಒಂದು ಕೋಟಿ ನಗದು ಇದ್ದ ಬಗ್ಗೆ ಕೊಲೆಯಾಗುವ ಮೂರು ದಿನ ಮೊದಲು ನನ್ನಲ್ಲಿ ಹೇಳಿಕೊಂಡಿದ್ದ. ಹಣ ಮತ್ತು ಚಿನ್ನಕ್ಕಾಗಿ ಈ ಕೊಲೆ ನಡೆದಿದ್ದಾಗಿ ಅನಿಸುತ್ತಿದೆ ಎಂದು ರಾಧಾ ಹೇಳಿದ್ದಾರೆ.
ಈ ಬಗ್ಗೆ ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್ ಅವರನ್ನು ಸಂಪರ್ಕಿಸಿದಾಗ, ಹಣ ಮತ್ತು ಬಂಗಾರದ ಬಗ್ಗೆ ಆರಂಭದಲ್ಲಿ ದೂರು ನೀಡುವಾಗ ಹೇಳಿರಲಿಲ್ಲ. ಹಾಗಾಗಿ ಎಫ್ಐಆರ್ ನಲ್ಲಿ ಸೇರಿಸಿಕೊಂಡಿರಲಿಲ್ಲ. ಈಗ ಪ್ರಕರಣದ ತನಿಖೆ ಮುಂದುವರಿದಿದ್ದು, ಅಗತ್ಯ ಬಿದ್ದಲ್ಲಿ ಸೇರಿಸಿಕೊಳ್ಳುತ್ತೇವೆ. ಸದ್ಯದಲ್ಲೇ ಪ್ರಕರಣದ ವಿವರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಬಂಟ್ವಾಳ ಪೊಲೀಸರಿಂದ ಸಿಕ್ಕ ಮಾಹಿತಿ ಪ್ರಕಾರ, ಹಣ, ಬಂಗಾರ ಏನೆಲ್ಲಾ ಸಿಕ್ಕಿತ್ತು, ಎಲ್ಲವನ್ನೂ ಕೋರ್ಟಿಗೆ ಒಪ್ಪಿಸಲಿದ್ದೇವೆ. ಅದರಲ್ಲಿ ಎಷ್ಟಿತ್ತು. ಎಷ್ಟು ಬಂಗಾರ ಇತ್ತು ಎನ್ನೋದು ನಮಗೆ ಗೊತ್ತಿಲ್ಲ. ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದೇವೆ. ಹಲವು ವಿಚಾರಗಳು ಹೊರಬಂದಿವೆ. ಐದಾರು ತಂಡಗಳು ಸೇರಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಕೊಲೆಗೆ ಯಾರು ಬೆಂಬಲ ಕೊಟ್ಟಿದ್ದರು. ಯಾರಾದ್ರೂ ಸುಪಾರಿ ಕೊಟ್ಟಿದ್ದರೇ ಇವೆಲ್ಲ ವಿಚಾರದ ಬಗ್ಗೆ ಆರೋಪಿಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
Radha, mother of Surendra Bantea and brother Chandrahas have alleged that Surendra had one crore rupees cash in the Bhandaribettu flat and he had about a kilogram of gold ornaments on his body which are missing and that he was eliminated with an eye on these things.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:10 pm
Mangalore Correspondent
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm