ಬ್ರೇಕಿಂಗ್ ನ್ಯೂಸ್
29-03-23 01:27 pm HK News Desk ಕ್ರೈಂ
ಕೋಲ್ಕತಾ, ಮಾ.29: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ವ್ಯಕ್ತಿಯೊಬ್ಬ ತನಗೆ ಮಕ್ಕಳಾಗಬೇಕೆಂದು ಪಕ್ಕದ ಮನೆಯ ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ನರಬಲಿ ನೀಡಿದ ಘಟನೆ ವರದಿಯಾಗಿದ್ದು, ಏಳು ವರ್ಷದ ಬಾಲಕಿಯ ಶವ ಚೀಲವೊಂದರಲ್ಲಿ ಪತ್ತೆಯಾಗಿದೆ. ಇದು ಕೋಲ್ಕತಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ವ್ಯಾಪಕ ಪ್ರತಿಭಟನೆಗಳು ನಡೆದಿವೆ.
ಕೋಲ್ಕತಾದ ತಿಲ್ಜಲಾ ಪ್ರದೇಶದಿಂದ ನೆರೆಮನೆಯ ಅಲೋಕ್ ಕುಮಾರ್ ಎಂಬಾತನಿಂದ ಅಪಹೃತಳಾಗಿದ್ದ ಬಾಲಕಿಯ ಶವ, ಆತನ ಫ್ಲ್ಯಾಟ್ನಲ್ಲಿ ಮೂಟೆಯೊಂದರಲ್ಲಿ ಪತ್ತೆಯಾಗಿತ್ತು. ಭಾನುವಾರ ಬೆಳಿಗ್ಗೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಈ ಸಂಬಂಧ 32 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು (ಎನ್ಸಿಪಿಸಿಆರ್), ಪಶ್ಚಿಮ ಬಂಗಾಳ ಡಿಜಿಪಿಗೆ ಪತ್ರ ಬರೆದಿದ್ದು, 48 ಗಂಟೆಗಳ ಒಳಗೆ ವಿಸ್ತೃತ ವರದಿ ನೀಡುವಂತೆ ಸೂಚಿಸಿದೆ.

ವಾಹನಗಳನ್ನು ಧ್ವಂಸಗೊಳಿಸಿದ ಜನರು;
ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಮತ್ತು ಭಯಾನಕ ಹತ್ಯೆ ವಿರುದ್ಧ ಸ್ಥಳೀಯರು ನಡೆಸಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸ್ಥಳೀಯರು ಅನೇಕ ವಾಹನಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆ. ಅಪಹೃತ ಬಾಲಕಿಯ ಪತ್ತೆಗೆ ಪೊಲೀಸರು ಕೂಡಲೇ ಮುಂದಾಗದೆ ತಡ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಘರ್ಷಣೆ ಸಂಬಂಧ ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಪ್ರತಿಭಟನಾ ಸ್ಥಳದ ಕೆಲವು ವಿಡಿಯೋಗಳನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ನಿರ್ವಹಿಸಲು ಮಮತಾ ಬ್ಯಾನರ್ಜಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಬಾಲಕಿಯನ್ನು ಬಲಿಕೊಡಲು ಹೇಳಿದ್ದ ಮಂತ್ರವಾದಿ;
ಮಂತ್ರವಾದಿ ಒಬ್ಬನ ಸಲಹೆಯಂತೆ ಬಾಲಕಿಯನ್ನು ಬಲಿಕೊಟ್ಟಿರುವುದಾಗಿ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ತನಗೆ ಮಗು ಆಗುತ್ತಿಲ್ಲ ಎಂದು ಕೆಲವು ತಿಂಗಳ ಹಿಂದೆ ಬಿಹಾರದ ಮಂತ್ರವಾದಿಯೊಬ್ಬನನ್ನು ಭೇಟಿ ಮಾಡಿದ್ದಾಗಿ ತಿಳಿಸಿರುವ ಅಲೋಕ್ ಕುಮಾರ್, ತನ್ನದೇ ಸ್ವಂತ ಮಗು ಬೇಕೆಂದರೆ ನವರಾತ್ರಿ ಅವಧಿಗೂ ಮುನ್ನ ಬಾಲಕಿಯೊಬ್ಬಳನ್ನು ಬಲಿ ಕೊಡಬೇಕು ಎಂದು ಸಲಹೆ ಕೊಟ್ಟಿದ್ದ ಎಂದು ಹೇಳಿದ್ದಾನೆ.
ಬಿಹಾರದ ಸಮಷ್ಠಿಪುರದ ಮೂಲದವನಾಗಿದ್ದು, ಕೋಲ್ಕತಾದಲ್ಲಿ ನೆಲೆಸಿರುವ ಅಲೋಕ್ ಕುಮಾರ್, ಮಂತ್ರವಾದಿಯ ಸಲಹೆಯಂತೆ ಬಾಲಕಿಯನ್ನು ಅಪಹರಿಸಿದ್ದ. ಬಳಿಕ ತನ್ನ ಫ್ಲ್ಯಾಟ್ನಲ್ಲಿ ಆಕೆಯ ಕತ್ತು ಹಿಸುಕಿ ಭಯಾನಕವಾಗಿ ಕೊಂದಿದ್ದ. ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಸುತ್ತಿಗೆಯಿಂದ ಹೊಡೆದಿರಬಹುದು ಎಂದು ಅನುಮಾನಿಸಲಾಗಿದೆ. ಆಕೆಯ ಗುಪ್ತಾಂಗಗಳಲ್ಲಿ ಕೂಡ ಗಾಯದ ಕಲೆಗಳಿದ್ದವು.
A man accused of killing a 7-year-old neighbour in Kolkata’s Tiljala area has confessed that he killed the minor on the advice of a tantrik, claimed a police source. According to the source, Alok Kumar said to fulfil his desire to have a child, he met a tantrik in Bihar a few months ago. The trantrik had instructed him to sacrifice a minor by Navratri if he wished to have a biological child.
03-02-26 11:53 am
Bangalore Correspondent
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
03-02-26 11:31 am
Mangalore Correspondent
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm