ಬ್ರೇಕಿಂಗ್ ನ್ಯೂಸ್
23-10-20 03:26 pm Bangalore Correspondent ಕ್ರೈಂ
ಬೆಂಗಳೂರು, ಅಕ್ಟೋಬರ್ 23: ಹಣ ಡಬಲ್ ಮಾಡಿಕೊಡುತ್ತೇವೆಂದು ಹೇಳಿ ವಂಚಿಸತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಹೈದರಾಬಾದ್ ಮೂಲದ ಹತ್ತು ಜನರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ವಿಜಯಕುಮಾರ್ (45), ಎಸ್.ಮಧುಸೂದನ್(42), ಪುಲ್ಲಪ್ಪ (43), ಎಂ.ಕಿರಣ್ (44), ಜಿ.ಪದ್ಮ (45), ಸೂರ್ಯಭಾಸ್ಕರ್ (45), ಸುಧಾಕರ್ (38), P. ಮುಧು (35), ಶಿವರಾತ್ರಿ ವೆಂಕಣ್ಣ (40), ಪ್ರಕಾಶ್ ಬಾಬು (60) ಬಂಧಿತ ಆರೋಪಿಗಳಾಗಿದ್ದು ಎರಡು ಲಾಡ್ಜ್ ಗಳಲ್ಲಿ ಇದ್ದುಕೊಂಡು ಅಮಾಯಕರನ್ನು ಮರುಳು ಮಾಡಿ ಹಣ ದೋಚುತ್ತಿದ್ದರು.

500 ರೂಪಾಯಿಗೆ 1000 ರೂ. ಕೊಡುತ್ತೇವೆ ಎಂದು ನಂಬಿಸುತ್ತಿದ್ದ ತಂಡ, ನೋಟಿನ ಆಕಾರದ ಕಪ್ಪು ಬಣ್ಣದ ಪೇಪರ್ ಮೇಲೆ 500, 2000 ಮೌಲ್ಯದ ನೋಟು ಇಟ್ಟು ನಕಲಿ ಪ್ರಿಂಟ್ ಹೊಡೆಯುತ್ತಿದ್ದರು. ಅದೇ ಮಾದರಿಯ ನಕಲಿ ನೋಟುಗಳನ್ನು ಜನರಿಗೆ ನೀಡುತ್ತಿದ್ದರು. ಖದೀಮರು ಕಪ್ಪು ಹಣ ಡಬ್ಲಿಂಗ್ ಮಾಡಿಕೊಡಲು 15% ಕಮಿಷನ್ ಕೂಡ ಪಡೆಯುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
2000 ರೂ. ಮೌಲ್ಯದ ಪಿಂಕ್ ನೋಟು ಕೊಡುವುದಾಗಿಯೂ ಜನರನ್ನು ನಂಬಿಸುತ್ತಿದ್ದರು. ಒಂದು ನೋಟಿಗೆ ಎರಡು ನೋಟ್ ಪಡೆಯುವ ಆಮಿಷಕ್ಕೆ ಬಲಿಯಾದ ಅದೆಷ್ಟೋ ಮಂದಿ ಈ ಜಾಲದಲ್ಲಿ ಹಣ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಪಿಂಕ್ ಮತ್ತು ಗ್ರೀನ್ ಎಂಬ ಕೋಡ್ ವರ್ಡ್ ಇಟ್ಟುಕೊಂಡು ಮನಿ ಡಬ್ಲಿಂಗ್ ಜಾಲ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ, ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಸ್ಥಳೀಯ ಮಹಿಳೆಯರು, ವೃದ್ಧರನ್ನೂ ತೊಡಗಿಸಿಕೊಂಡು ಹೈದರಾಬಾದ್ ಮೂಲದ ತಂಡ ಈ ಜಾಲ ನಿರ್ವಹಣೆ ಮಾಡುತ್ತಿತ್ತು.
Ten persons have been arrested in Money Doubling case by Bangalore City police. It is said this gang were cheating the innocents in the name of money doubling.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm