ಬ್ರೇಕಿಂಗ್ ನ್ಯೂಸ್
23-10-20 03:26 pm Bangalore Correspondent ಕ್ರೈಂ
ಬೆಂಗಳೂರು, ಅಕ್ಟೋಬರ್ 23: ಹಣ ಡಬಲ್ ಮಾಡಿಕೊಡುತ್ತೇವೆಂದು ಹೇಳಿ ವಂಚಿಸತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಹೈದರಾಬಾದ್ ಮೂಲದ ಹತ್ತು ಜನರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ವಿಜಯಕುಮಾರ್ (45), ಎಸ್.ಮಧುಸೂದನ್(42), ಪುಲ್ಲಪ್ಪ (43), ಎಂ.ಕಿರಣ್ (44), ಜಿ.ಪದ್ಮ (45), ಸೂರ್ಯಭಾಸ್ಕರ್ (45), ಸುಧಾಕರ್ (38), P. ಮುಧು (35), ಶಿವರಾತ್ರಿ ವೆಂಕಣ್ಣ (40), ಪ್ರಕಾಶ್ ಬಾಬು (60) ಬಂಧಿತ ಆರೋಪಿಗಳಾಗಿದ್ದು ಎರಡು ಲಾಡ್ಜ್ ಗಳಲ್ಲಿ ಇದ್ದುಕೊಂಡು ಅಮಾಯಕರನ್ನು ಮರುಳು ಮಾಡಿ ಹಣ ದೋಚುತ್ತಿದ್ದರು.

500 ರೂಪಾಯಿಗೆ 1000 ರೂ. ಕೊಡುತ್ತೇವೆ ಎಂದು ನಂಬಿಸುತ್ತಿದ್ದ ತಂಡ, ನೋಟಿನ ಆಕಾರದ ಕಪ್ಪು ಬಣ್ಣದ ಪೇಪರ್ ಮೇಲೆ 500, 2000 ಮೌಲ್ಯದ ನೋಟು ಇಟ್ಟು ನಕಲಿ ಪ್ರಿಂಟ್ ಹೊಡೆಯುತ್ತಿದ್ದರು. ಅದೇ ಮಾದರಿಯ ನಕಲಿ ನೋಟುಗಳನ್ನು ಜನರಿಗೆ ನೀಡುತ್ತಿದ್ದರು. ಖದೀಮರು ಕಪ್ಪು ಹಣ ಡಬ್ಲಿಂಗ್ ಮಾಡಿಕೊಡಲು 15% ಕಮಿಷನ್ ಕೂಡ ಪಡೆಯುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
2000 ರೂ. ಮೌಲ್ಯದ ಪಿಂಕ್ ನೋಟು ಕೊಡುವುದಾಗಿಯೂ ಜನರನ್ನು ನಂಬಿಸುತ್ತಿದ್ದರು. ಒಂದು ನೋಟಿಗೆ ಎರಡು ನೋಟ್ ಪಡೆಯುವ ಆಮಿಷಕ್ಕೆ ಬಲಿಯಾದ ಅದೆಷ್ಟೋ ಮಂದಿ ಈ ಜಾಲದಲ್ಲಿ ಹಣ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಪಿಂಕ್ ಮತ್ತು ಗ್ರೀನ್ ಎಂಬ ಕೋಡ್ ವರ್ಡ್ ಇಟ್ಟುಕೊಂಡು ಮನಿ ಡಬ್ಲಿಂಗ್ ಜಾಲ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ, ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಸ್ಥಳೀಯ ಮಹಿಳೆಯರು, ವೃದ್ಧರನ್ನೂ ತೊಡಗಿಸಿಕೊಂಡು ಹೈದರಾಬಾದ್ ಮೂಲದ ತಂಡ ಈ ಜಾಲ ನಿರ್ವಹಣೆ ಮಾಡುತ್ತಿತ್ತು.
Ten persons have been arrested in Money Doubling case by Bangalore City police. It is said this gang were cheating the innocents in the name of money doubling.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am