ಬ್ರೇಕಿಂಗ್ ನ್ಯೂಸ್
26-11-22 01:38 pm HK News Desk ಕ್ರೈಂ
ಬೇಗುಸರಾಯ್ ನ.26: ನಿಲ್ಲಿಸಿದ್ದ ರೈಲು ಇಂಜಿನ್ ಬಿಡಿ ಭಾಗಗಳನ್ನು ಕದಿಯಲು ಕಳ್ಳರು ಹಳಿಯ ಅಡಿಭಾಗದಿಂದಲೇ ಸುರಂಗ ಕೊರೆದ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಗರ್ಹರಾ ರೈಲ್ವೇ ಯಾರ್ಡ್ಗೆ ಕಳ್ಳರ ಗುಂಪೊಂದು ಸುರಂಗ ಕೊರೆದು ರಿಪೇರಿಗಾಗಿ ಯಾರ್ಡ್ನಲ್ಲಿ ಇರಿಸಲಾಗಿದ್ದ ರೈಲಿನ ಎಂಜಿನ್ ಅನ್ನು ಭಾಗಶಃ ಕದ್ದಿದ್ದಾರೆ. ರೈಲ್ವೇ ಯಾರ್ಡ್ಗೆ ದುರಸ್ತಿಗಾಗಿ ಇರಿಸಲಾಗಿದ್ದ ರೈಲು ಎಂಜಿನ್ ಕಳ್ಳತನಕ್ಕೆ ಸಂಬಂಧಿಸಿ ಸ್ಥಳೀಯ ಬರೌನಿ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಪ್ರಕರಣ ದಾಖಲಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ, ರೈಲ್ವೇ ಯಾರ್ಡ್ಗೆ ಸುರಂಗ ಕೊರೆದು, ಅದರ ಮೂಲಕ ಇಂಜಿನ್ ಬಿಡಿ ಭಾಗಗಳು ಮತ್ತು ಇತರ ವಸ್ತುಗಳನ್ನು ಗೋಣಿಚೀಲಗಳಲ್ಲಿ ಸಾಗಿಸುತ್ತಿದ್ದಾಗಿ ತಿಳಿಸಿದ್ದಾರೆ.
ಬಂಧಿತರು ವಿಚಾರಣೆಯಲ್ಲಿ ಗುಜರಿ ಗೋಡೌನ್ ಬಗ್ಗೆಯೂ ತಿಳಿಸಿದ್ದು, ಮುಜಫರ್ಪುರ ಜಿಲ್ಲೆಯ ಪ್ರಭಾತ್ ನಗರ ಪ್ರದೇಶದಲ್ಲಿನ ಸ್ಕ್ರ್ಯಾಪ್ ಗೋಡೌನ್ನಲ್ಲಿ ಶೋಧ ನಡೆಸಲಾಗಿದೆ. ಅಲ್ಲಿ ಪೊಲೀಸರು ರೈಲುಗಳಲ್ಲಿ ಬಳಸುವ ಉಪಕರಣಗಳನ್ನು ಹೊಂದಿದ್ದ 13 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
![]()
ವಶಪಡಿಸಿಕೊಂಡ ವಸ್ತುಗಳಲ್ಲಿ ಎಂಜಿನ್ ಭಾಗಗಳು, ವಿಂಟೇಜ್ ರೈಲು ಎಂಜಿನ್ಗಳ ಚಕ್ರಗಳು ಮತ್ತು ಭಾರವಾದ ಕಬ್ಬಿಣದ ಬಿಡಿಭಾಗಗಳು ಸೇರಿವೆ. ಸದ್ಯ ಸ್ಕ್ರ್ಯಾಪ್ ಗೋಡೌನ್ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪೊಲೀಸರ ಪ್ರಕಾರ, ಈ ಗ್ಯಾಂಗ್ ಸ್ಟೀಲ್ ಬ್ರಿಡ್ಜ್ಗಳನ್ನು ಬಿಚ್ಚುವುದು ಮತ್ತು ಅವುಗಳ ಭಾಗಗಳನ್ನು ಕದಿಯುವಲ್ಲಿ ಸಹ ತೊಡಗಿಸಿಕೊಂಡಿದೆ. ಕಳೆದ ವರ್ಷ, ಸಮಸ್ತಿಪುರ ಲೋಕೋ ಡೀಸೆಲ್ ಶೆಡ್ನ ರೈಲ್ವೇ ಇಂಜಿನಿಯರ್ ಒಬ್ಬರನ್ನು ಪುರ್ನಿಯಾ ನ್ಯಾಯಾಲಯದ ಆವರಣದಲ್ಲಿ ಇರಿಸಲಾಗಿದ್ದ ಹಳೆಯ ಸ್ಟೀಮ್ ಎಂಜಿನ್ ಅನ್ನು ಮಾರಾಟ ಮಾಡಿದ ಆರೋಪದಲ್ಲಿ ಅಮಾನತು ಮಾಡಲಾಗಿತ್ತು.
A group of unidentified men dug a tunnel to the Garhara railway yard in Bihar's Begusarai district and stole an entire diesel engine of a train, which was kept at the yard for repairs, part by part, said police on Friday. P S Dubey, the inspector of Railway Protection Force (RPF), Muzaffarpur, said three people were arrested after a case was registered last week at the Barauni police station for the theft of the diesel engine brought for repairs to the Garhara yard.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm