ಬ್ರೇಕಿಂಗ್ ನ್ಯೂಸ್
12-08-22 07:50 pm HK News Desk ಕ್ರೈಂ
ರಾಮನಗರ, ಆಗಸ್ಟ್ 12 : ಅಜ್ಜಿಯೊಬ್ಬರು ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಠೇವಣಿಯಿಟ್ಟಿದ್ದ ಹಣವನ್ನು ನಕಲಿ ದಾಖಲೆ ಹಾಗೂ ನಕಲಿ ಮೊಮ್ಮಗಳನ್ನು ಬ್ಯಾಂಕಿಗೆ ತೋರಿಸಿ ಕಬಳಿಸಿದ ಪ್ರಕರಣ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದಿದೆ.
ರಾಮನಹಳ್ಳಿಯ ವೃದ್ಧೆ ನಂಜಮ್ಮ ಎಂಬವರು ಬಿಡದಿಯ ಕೆನರಾ ಬ್ಯಾಂಕ್ನಲ್ಲಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಟ್ಟಿದ್ದರು. ಕೆಲವು ಸಮಯದ ಬಳಿಕ ನಂಜಮ್ಮ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಅಜ್ಜಿಯ ಸಂಬಂಧಿಕರಾಗಿದ್ದ ರತ್ಮಮ್ಮ ಮತ್ತು ಜಗದೀಶ್ ಎಂಬವರು ಬ್ಯಾಂಕ್ಗೆ ಜ್ಞಾನೇಶ್ವರಿ ಹೆಸರಲ್ಲಿ ಬಾಲಕಿಯನ್ನು ಕರೆತಂದಿದ್ದು ತಮ್ಮದೇ ಮಗಳು ಜ್ಞಾನೇಶ್ವರಿ. ತಾಯಿ ನಂಜಮ್ಮ ತೀರಿಕೊಂಡಿದ್ದಾರೆಂದು ಜಗದೀಶ್ ದಾಖಲೆ ತೋರಿಸಿದ್ದರು. ಅಲ್ಲದೆ, ಠೇವಣಿ ಹಣಕ್ಕೆ ಜ್ಞಾನೇಶ್ವರಿ ತಂದೆಯಾದ ತನ್ನನ್ನು ಮೈನರ್ ಗಾರ್ಡಿಯನ್ ಆಗಿಸಿ, ಜಂಟಿ ಖಾತೆಯಲ್ಲಿ ಠೇವಣಿ ವರ್ಗಾವಣೆ ಮಾಡಲು ಹೇಳಿದ್ದರು. ಅಲ್ಲದೆ ನಂಜಮ್ಮರ ಮರಣ ಪ್ರಮಾಣಪತ್ರ, ಠೇವಣಿ ಹಣದ ಬಾಂಡ್ ನಂಬರ್ ಸಹಿತ ದಾಖಲೆಗಳನ್ನು ಬ್ಯಾಂಕ್ಗೆ ನೀಡಿದ್ದರು. ಇದರ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ನಂಜಮ್ಮ ಇಟ್ಟಿದ್ದ 5 ಲಕ್ಷ ರೂ.ಗಳನ್ನು ಜಗದೀಶ್ ಅವರ ಹೆಸರಿನಲ್ಲಿ ತೆರೆದಿದ್ದ ಜಂಟಿ ಉಳಿತಾಯ ಖಾತೆಗೆ 2022ರ ಜೂನ್ 23ರಂದು ವರ್ಗಾವಣೆ ಮಾಡಿದ್ದರು.
ಇದಾದ ನಂತರ 2022ರ ಜುಲೈ 1ರಂದು ಮೃತ ನಂಜಮ್ಮ ಅವರ ಮಗ ಚಂದ್ರಶೇಖರ್ ಬ್ಯಾಂಕ್ಗೆ ಬಂದು ತನ್ನ ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ತಾಯಿ ಇಟ್ಟಿರುವ ಠೇವಣಿ ಹಣದ ಬಗ್ಗೆ ವಿಚಾರಿಸಿದ್ದರು. ಬ್ಯಾಂಕ್ ಸಿಬ್ಬಂದಿ ದಾಖಲೆ ಪರಿಶೀಲಿಸಿದಾಗ, ಇದಕ್ಕೂ ಹಿಂದೆ ರತ್ನಮ್ಮ ಹಾಗೂ ಜಗದೀಶ್ ಅವರು ಬ್ಯಾಂಕ್ಗೆ ಸಲ್ಲಿಸಿದ್ದ ದಾಖಲೆಗಳು ನಕಲಿ ಅಲ್ಲದೆ, ಬ್ಯಾಂಕ್ಗೆ ಕರೆತಂದಿದ್ದ ಜ್ಞಾನೇಶ್ವರಿಯೂ ನಕಲಿ ಎಂದು ಗೊತ್ತಾಗಿದೆ. ರತ್ನಮ್ಮ ಹಾಗೂ ಜಗದೀಶ್ ಮೋಸ ಎಸಗಿರುವ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಕೇಶವಮೂರ್ತಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Family loot Rs 5 lakhs by showing fake grand daughter in the bank at Ramnagara.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am