ಬ್ರೇಕಿಂಗ್ ನ್ಯೂಸ್
06-08-22 01:32 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 6: ನಂಬಿಕಸ್ಥರಂತೆ ನಟಿಸಿದ್ದಲ್ಲದೆ, ಮಹಾರಾಷ್ಟ್ರದಲ್ಲಿ ಫಾರ್ಮ್ ಡೈರಿ ಮಾಡುತ್ತಿದ್ದೇವೆಂದು ಹೇಳಿ 1.75 ಕೋಟಿ ಬ್ಯಾಂಕ್ ಸಾಲ ಪಡೆದು ಅದಕ್ಕೆ ಜಾಮೀನು ನಿಲ್ಲಿಸಿ ಮೋಸಗೈದ ಬಗ್ಗೆ ವ್ಯಕ್ತಿಯೊಬ್ಬರು ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಧ್ವರಾಯ ಭಟ್ ಎಂಬವರು ಮೋಸ ಹೋದವರಾಗಿದ್ದು, ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ. ರಕ್ಷಾ ಬಾಳಿಗ, ನಿಧಿ ವಾಸುದೇವ ಕಾಮತ್ ಮತ್ತು ವಾಸುದೇವ ಕಾಮತ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ವಾಸುದೇವ ಕಾಮತ್ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಮಧ್ವರಾಯ ಭಟ್ ಅವರಿಗೆ ಪರಿಚಿತರೇ ಆಗಿದ್ದರು. ಹೀಗಾಗಿ ಮಹಾರಾಷ್ಟ್ರದಲ್ಲಿ ಡೈರಿ ಫಾರ್ಮ್ ಮಾಡುತ್ತಿದ್ದೇವೆಂದು ಹೇಳಿ ನಂಬಿಸಿದ್ದಲ್ಲದೆ, ಮಂಗಳೂರಿನ ಭಾರತ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ 1.75 ಕೋಟಿ ರುಪಾಯಿ ಸಾಲ ಪಡೆದಿದ್ದಾರೆ.
ಸಾಲದ ಮೊತ್ತಕ್ಕೆ ಮಧ್ವರಾಯ ಭಟ್ ಅವರನ್ನು ಜಾಮೀನು ನಿಲ್ಲುವಂತೆ ಪುಸಲಾಯಿಸಿದ್ದು ಭಟ್ ಅವರಿಗೆ ಸೇರಿದ 2.5 ಕೋಟಿ ಮೌಲ್ಯದ ಆಸ್ತಿಯ ದಾಖಲೆಯನ್ನು ಭದ್ರತೆಯಾಗಿ ಇರಿಸಿದ್ದರು. ಆರು ತಿಂಗಳಿಗಷ್ಟೇ ನಿಮ್ಮ ಭದ್ರತೆ ಸಾಕು, ಆಮೇಲೆ ನಾವು ಜಾಮೀನಿಗೆ ಬೇರೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಅದರಂತೆ, ವಿಶ್ವಾಸದಲ್ಲಿ ನಂಬಿದ್ದ ಮಧ್ವರಾಯ ಭಟ್ ಭದ್ರತೆ ನಿಲ್ಲುವುದಕ್ಕೆ ಒಪ್ಪಿದ್ದರು. ಆದರೆ, ವಾಸುದೇವ ಕಾಮತ್ ಮತ್ತು ಇತರರು ಬ್ಯಾಂಕಿಗೆ ಸಾಲ ಪಾವತಿ ಮಾಡದೆ ಮೋಸ ಮಾಡಿದ್ದಾರೆ. ಬ್ಯಾಂಕಿನಿಂದ ಮಧ್ವರಾಯ ಭಟ್ ಗೆ ನೋಟೀಸ್ ಬಂದಿದ್ದು, ಈ ಬಗ್ಗೆ ಆ ಮೂವರ ಗಮನಕ್ಕೆ ತಂದಾಗ ಬೆದರಿಸಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಲ್ಲದೆ, ನಾಪತ್ತೆಯಾಗಿದ್ದಾರೆ.
ನಂಬಿಕಸ್ಧರಂತೆ ನಟಿಸಿ ಮೋಸಗೈದ ಮೂವರು ಆರೋಪಿಗಳ ವಿರುದ್ಧ ಮಧ್ವರಾಯ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಬ್ಯಾಂಕಿನಿಂದ ಸಾಲ ತೆಗೆದುಕೊಂಡವರು ನಾಪತ್ತೆಯಾಗಿದ್ದರಿಂದ ಭಟ್ ಅವರಿಗೆ ನೋಟೀಸ್ ಬಂದಿದ್ದು ನೀವೇ ಸಾಲ ಪಾವತಿ ಮಾಡುವಂತೆ ಸೂಚಿಸಿದೆ. ಹೀಗಾಗಿ ಮಧ್ವರಾಯ ಭಟ್ ಕಂಗಾಲಾಗಿದ್ದಾರೆ.
A man filed complaint over three people of cheating his faith in them in posing as a guarantor for their bank loan by pledging his property worth Rs 2.5 crore. Madhwaraya Bhat is the person who is taken for ride by Raksha Baliga, Nidhi Vasudeva Kamath and Vasudeva Kamath.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm