ಬ್ರೇಕಿಂಗ್ ನ್ಯೂಸ್
25-11-25 09:53 pm Mangalore Correspondent ಕರಾವಳಿ
ಮಂಗಳೂರು, ನ.25 : ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಮಂಡಳಿಯ ಆರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ನಿರಾಯಾಸ ಜಯ ಸಾಧಿಸಿದ್ದಾರೆ. 13 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಮಾಡಿಕೊಂಡಿದ್ದ ಸಹಕಾರ ಭಾರತಿಗೆ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲೂ ಜಯ ಸಿಕ್ಕಿದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಚುನಾವಣಾ ಕಣದಲ್ಲಿದ್ದ ಎಸ್.ಆರ್ ಸತೀಶ್ಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ, ಪುರುಷೋತ್ತಮ ಭಟ್, ಎವಿ ತೀರ್ಥರಾಮ ಮತ್ತು ಮುರಳಿಕೃಷ್ಣ ಚಳ್ಳಂಗಾರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನ.23ರಂದು ಆರು ಸ್ಥಾನಗಳಿಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಚುನಾವಣೆ ನಡೆದಿದ್ದು, 45 ಶೇ. ಮತದಾನ ಆಗಿತ್ತು. 25ರಂದು ನಡೆದ ಮತ ಎಣಿಕೆಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಆರು ಮಂದಿಯೂ ನಿರಾಯಾಸ ಗೆಲುವು ಸಾಧಿಸಿದ್ದಾರೆ.
ಹೆಚ್ಚು ಕಡಿಮೆ ಅವಿರೋಧ ಆಯ್ಕೆಯಿಂದಲೇ ಕ್ಯಾಂಪ್ಕೋ ಆಡಳಿತ ಹಿಡಿಯುತ್ತಿದ್ದ ಸಹಕಾರ ಭಾರತಿ 15 ವರ್ಷಗಳ ಹಿಂದೆ ಕೆಲವು ಸ್ಥಾನಗಳಿಗೆ ಚುನಾವಣೆ ಎದುರಿಸಿತ್ತು. ಆನಂತರ, ಈ ಬಾರಿ ಆರೆಸ್ಸೆಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ಸದಸ್ಯರೇ ಬಂಡಾಯ ನಿಂತಿದ್ದರಿಂದ ಚುನಾವಣೆ ನಡೆದಿತ್ತು. ಕಿಸಾನ್ ಸಂಘದ ಪ್ರಮುಖರು ತಮ್ಮ ಅಭ್ಯರ್ಥಿಗಳು ಕಣದಲ್ಲಿ ಇಲ್ಲ ಎಂದು ಹೇಳಿದ್ದರೂ ಸತ್ಯನಾರಾಯಣ ಎಂ.ಜಿ ಮತ್ತು ರಾಮ್ ಪ್ರತೀಕ್ ಅವರು ಕಣಕ್ಕಿಳಿದು ಕುತೂಹಲ ಮೂಡಿಸಿದ್ದರು. ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ ಕೇರಳದ 9 ಮತ್ತು ಕರ್ನಾಟಕದ ನಾಲ್ಕು ಸೇರಿದಂತೆ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.
ಸಂಸ್ಥೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರಿದ್ದರೂ ಕೇವಲ 5576 ಮಂದಿಗೆ ಮಾತ್ರ ಮತದಾನದ ಅವಕಾಶ ಇತ್ತು. ಮತದಾನ ಅರ್ಹತೆ ಪಡೆಯಲು ಕನಿಷ್ಠ ಮೂರು ಮಹಾಸಭೆಗೆ ಹಾಜರಾಗಿರಬೇಕು ಎಂಬ ನಿಯಮದಂತೆ ಹೆಚ್ಚಿನ ಸದಸ್ಯರಿಗೆ ಮತದಾನ ಅವಕಾಶ ಇರಲಿಲ್ಲ. ಇದರ ಪೈಕಿ 2573 ಮತಗಳು ಚಲಾವಣೆಯಾಗಿದ್ದು 33 ಮತಗಳು ಅಸಿಂಧು ಆಗಿದ್ದವು. ಮುರಳಿಕೃಷ್ಣ 2261 ಮತ, ಪುರುಷೋತ್ತಮ ಭಟ್- 2249, ಮಹೇಶ್ ಚೌಟ-2216, ಎಸ್.ಆರ್ ಸತೀಶ್ಚಂದ್ರ- 2181, ದಯಾನಂದ ಹೆಗ್ಡೆ- 2163, ಎವಿ ತೀರ್ಥರಾಮ -2052 ಮತಗಳನ್ನು ಪಡೆದಿದ್ದರು. ಎಂಜಿ ಸತ್ಯನಾರಾಯಣ 620 ಮತ್ತು ರಾಮ ಪ್ರತೀಕ್ 634 ಮತ ಪಡೆದಿದ್ದಾರೆ.
Cooperative Bharati achieved a clean sweep in the Campco administrative board elections, winning all six contested seats with a comfortable margin. With 13 members already elected unopposed, all six candidates of Cooperative Bharati secured victory in the polling held at Sharada Vidyalaya, Mangaluru. The election saw 45% voter turnout, and rebel candidates from Bharatiya Kisan Sangh were defeated by a huge margin.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm