ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗೇಮಿಂಗ್ ಆ್ಯಪಲ್ಲಿ ಹಣ ಕಳಕೊಂಡ ಮಾಹಿತಿ, ರೈಲ್ವೇ ಸ್ಟೇಷನಲ್ಲಿ ಸ್ಕೂಟರ್ ಪತ್ತೆ, ಗೋವಾ- ದೆಹಲಿಗೆ ತೆರಳಿರುವ ಶಂಕೆ 

16-11-25 10:48 pm       Mangalore Correspondent   ಕರಾವಳಿ

ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಯೋರ್ವ ತಾನು ನೆಲೆಸಿದ್ದ ಪಿಜಿಯಿಂದ ನಾಪತ್ತೆಯಾಗಿದ್ದು, ಆನ್ ಲೈನ್ ಗೇಮಿಂಗ್ ಆ್ಯಪಲ್ಲಿ ಲಕ್ಷಾಂತರ ರೂಪಾಯಿ ಕಳಕೊಂಡ ಹಿನ್ನಲೆಯಲ್ಲಿ ಮನನೊಂದು ನಾಪತ್ತೆಯಾಗಿರುವ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ತಿಳಿದುಬಂದಿದೆ.

ಉಳ್ಳಾಲ, ನ.16 : ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಯೋರ್ವ ತಾನು ನೆಲೆಸಿದ್ದ ಪಿಜಿಯಿಂದ ನಾಪತ್ತೆಯಾಗಿದ್ದು, ಆನ್ ಲೈನ್ ಗೇಮಿಂಗ್ ಆ್ಯಪಲ್ಲಿ ಲಕ್ಷಾಂತರ ರೂಪಾಯಿ ಕಳಕೊಂಡ ಹಿನ್ನಲೆಯಲ್ಲಿ ಮನನೊಂದು ನಾಪತ್ತೆಯಾಗಿರುವ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ತಿಳಿದುಬಂದಿದೆ.

ಕೇರಳ ರಾಜ್ಯದ ಪಾಲಕ್ಕಾಡ್ ನಿವಾಸಿ ರಾಬಿಯಾ- ಅಬೂಬಕರ್ ದಂಪತಿಯ ಪುತ್ರ ಮಾಲೀಕ್ ಅಬೂಬಕರ್(19)ನಾಪತ್ತೆಯಾದ ವಿದ್ಯಾರ್ಥಿ. ಮಾಲೀಕ್ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅಲ್ಲೇ ಸಮೀಪದ ಶರೀಫ್ ಎಂಬವರ ಪಿಜಿಯಲ್ಲಿ ವಾಸವಾಗಿದ್ದ. ನ.13ರಂದು ರಾತ್ರಿ ಡಿನ್ನರ್ ಮಾಡಿ ಬರುತ್ತೇನೆಂದು ಹೇಳಿ ಪಿಜಿಯಿಂದ‌ ಸ್ಕೂಟರಲ್ಲಿ ತೆರಳಿದ ಮಾಲೀಕ್ ಮತ್ತೆ ಹಿಂತಿರುಗದೆ ನಾಪತ್ತೆ ಆಗಿದ್ದಾನೆ. ಈ ಬಗ್ಗೆ ಮಾಲೀಕ್ ಮಾವ (ತಾಯಿಯ ತಮ್ಮ) ಫಿಸಿಯೋಥೆರಫಿ ವೈದ್ಯ ಅಝ್ಮಲ್ ಟಿ.ಎ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಮಾಲೀಕ್ ನ ಸ್ಕೂಟರ್ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ದೆಹಲಿಗೆ ತೆರಳುವ ಮಂಗಳಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾಲೀಕ್ ಆನ್ ಲೈನ್ ಗೇಮಿಂಗ್ ಆ್ಯಪಲ್ಲಿ ಮೂರು ಲಕ್ಷ ಹಣವನ್ನು ಕಳೆದುಕೊಂಡಿದ್ದು ಆ ಕಾರಣದಿಂದಲೇ ಮನನೊಂದು ನಾಪತ್ತೆಯಾಗಿದ್ದಾನೆಂದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

A Kerala-origin student studying at a private medical college in Deralakatte has gone missing from his PG accommodation. Preliminary police investigation has revealed that he had reportedly lost several lakhs of rupees through an online gaming app and was mentally disturbed before disappearing.