ಬ್ರೇಕಿಂಗ್ ನ್ಯೂಸ್
07-11-25 11:41 am Udupi Correspondent ಕರಾವಳಿ
ಉಡುಪಿ, ನ.7 : ತಯಾರಿಕೆಯಲ್ಲಿ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರನ್ನು ಬದಲಾಯಿಸಿ ನೀಡುವ ಅಥವಾ ಕಾರಿನ ಮೌಲ್ಯವನ್ನು ಮರಳಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಬ್ರಹ್ಮಾವರ ತಾಲೂಕಿನ ಕಚ್ಚೂರು ನಿವಾಸಿ ಶ್ರವಣ ಕುಮಾರ್ ಅವರು 2022 ರ ನ.16ರಂದು ಟೊಯೋಟಾ ಕಂಪೆನಿಯ ಇನೋವಾ ಕಾರನ್ನು 5 ವರ್ಷಗಳ ವಾರೆಂಟಿಯೊಂದಿಗೆ ಉಡುಪಿಯ ಯುನೈಟೆಡ್ ಟೊಯೋಟ ಪ್ರೈ.ಲಿ. ಮಳಿಗೆಯಲ್ಲಿ ಖರೀದಿಸಿದ್ದರು. ಕಾರು ಒಂದು ತಿಂಗಳ ವರೆಗೆ 1 ಸಾವಿರ ಕಿ.ಮೀ. ಚಲಿಸಿತ್ತು. ಅನಂತರ ಕಾರಿನ ತಯಾರಿಕಾ ದೋಷಗಳಿಂದ ಬಲಬದಿಯ ಟೈರ್ಗಳು ತನ್ನಷ್ಟಕ್ಕೆ ಜಖಂಗೊಂಡವು. ಈ ಬಗ್ಗೆ ಖರೀದಿಸಿದ ಮಳಿಗೆಗೆ ಮಾಹಿತಿ ನೀಡಿದರೂ ಅವರು ಸಮಸ್ಯೆಯನ್ನು ಪರಿಹರಿಸಲಿಲ್ಲ. ಸಂಪೂರ್ಣವಾಗಿ ತಯಾರಿಕಾ ದೋಷವನ್ನು ಅವಗಣಿಸಿ ಕಾರನ್ನು ಮಾಲಕರಿಗೆ ವಾಪಸು ನೀಡಿದ್ದರು.
ಆನಂತರ ಕಾರು ಕ್ರಮವಾಗಿ 5,000 ಕಿ.ಮೀ., 10,000 ಕಿ.ಮೀ. ಹಾಗೂ 3ನೇ ಸರ್ವೀಸ್ ಆದಾಗಲೂ ಆ ತಯಾರಿಕಾ ದೋಷ ಮತ್ತು ಟೈರ್ಗಳ ಸಮಸ್ಯೆ ಬಗೆಹರಿಯಲಿಲ್ಲ. ಅನಂತರ ಕಾರಿನ ಮಾರಾಟ ಮಳಿಗೆಯವರು ಕಾರಿಗೆ ಅಳವಡಿಸಿರುವ ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಟೈರ್ಗಳು ಇದಕ್ಕೆ ಕಾರಣವೆಂದು ಆ ಕಂಪೆನಿಗೆ ಟೈರ್ಗಳನ್ನು ಪುನರ್ಪರಿಶೀಲನೆಗೆ ಕಳುಹಿಸಿದರು. ಆದರೆ ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಟೈರ್ಗಳಲ್ಲಿ ಯಾವುದೇ ದೋಷಗಳಿಲ್ಲ ಎಂದು ವರದಿ ನೀಡಿತು.
ಕಾರು ಮಾರಾಟ ಮಾಡಿದ ಮಳಿಗೆಯವರು ಕಾರಿನ ವಾರಂಟಿ ಸಮಯದ ಒಳಗೆ ಆದ ತೊಂದರೆಯನ್ನು ಸರಿಪಡಿಸದೇ ಸೇವಾ ನ್ಯೂನತೆ ಮಾಡಿರುವ ಬಗ್ಗೆ ಕಾರಿನ ಮಾಲಕರು ಲೀಗಲ್ ನೋಟಿಸು ನೀಡಿದರೂ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಬಳಿಕ ಕಾರಿನ ತಯಾರಿಕರು, ಮಾರಾಟಗಾರರು ಮತ್ತು ಕಾರಿನ ಟೈರ್ ತಯಾರಿಕಾ ಸಂಸ್ಥೆಯ ಮೇಲೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದೂರು ದಾಖಲಿಸಲಾಯಿತು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ನ್ಯೂನತೆಯುಳ್ಳ ಕಾರನ್ನು ಬದಲಾಯಿಸಿ ಅದೇ ಮಾದರಿಯ ಹೊಸ ಕಾರನ್ನು ಮಾಲಕರಿಗೆ ನೀಡಬೇಕು. ಇಲ್ಲವೇ ಕಾರಿನ ಅಂದಿನ ಮೌಲ್ಯ 32,08,952 ರೂ.ಗಳಿಗೆ ಶೇ.9 ಬಡ್ಡಿಯೊಂದಿಗೆ 2022 ರ ನ.16 ಕ್ಕೆ ಅನ್ವಯವಾಗುವಂತೆ ಪಾವತಿ ಮಾಡಿದ ಆದೇಶದೊಂದಿಗೆ ಗ್ರಾಹಕರಿಗೆ ಆದ ಮಾನಸಿಕ ತೊಂದರೆಯ ಬಗ್ಗೆ 50,000 ರೂ. ಹಾಗೂ ದಾವೆ ಖರ್ಚು 10,000 ರೂ.ಗಳನ್ನು 45 ದಿನಗಳ ಒಳಗೆ ಪಾವತಿಸಬೇಕೆಂದು ಕಾರಿನ ತಯಾರಕರು ಮತ್ತು ಮಾರಾಟಗಾರರಿಗೆ ಆದೇಶಿಸಿದೆ.
ಕಾರಿನ ಮಾಲಕ ಶ್ರವಣ ಕುಮಾರ್ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಗಂಗಾಧರ್ ಎಚ್.ಎಂ. ಮತ್ತು ವಿಪಿನ್ ಜತ್ತನ್ ವಾದಿಸಿದರು.
The Udupi District Consumer Disputes Redressal Commission has ordered a car dealer and manufacturer to replace a defective Toyota Innova car or refund its full value, after finding that the vehicle had a manufacturing defect causing abnormal tyre wear on the right side.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
07-11-25 11:33 am
HK News Desk
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
07-11-25 11:41 am
Udupi Correspondent
ನ.9ರಂದು ಕೊಟ್ಟಾರದಲ್ಲಿ ಎಸ್.ಕೆ ಗೋಲ್ಡ್ ಸ್ಮಿತ್ ಸೊಸ...
06-11-25 10:50 pm
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm