ಮಂಗಳೂರಿನಲ್ಲಿ 'ಲಷ್ಕರ್ ಜಿಂದಾಬಾದ್' ಗೋಡೆ ಬರಹ ; ಕಿಡಿಗೇಡಿ ಕೃತ್ಯ ತಂದ ಆತಂಕ 

27-11-20 09:18 am       Mangaluru Correspondant   ಕರಾವಳಿ

ಅಪಾರ್ಟ್ಮೆಂಟ್ ಒಂದರ ಆವರಣ ಗೋಡೆಯಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. 

ಮಂಗಳೂರು, ನ.27: ಮಂಗಳೂರಿನ ಕದ್ರಿಯ ಅಪಾರ್ಟ್ಮೆಂಟ್ ಒಂದರ ಆವರಣ ಗೋಡೆಯಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. 

ಕದ್ರಿ ಭಾಗದಿಂದ ಸರ್ಕಿಟ್ ಹೌಸ್ ಮತ್ತು ಕದ್ರಿ ಪೊಲೀಸ್ ಠಾಣೆಗೆ ಹೋಗುವ ಬಟ್ಟಗುಡ್ಡೆ ರಸ್ತೆಯ ತಿರುವಿನ ಭಾಗದಲ್ಲಿ ಈ ಗೋಡೆಬರಹ ಕಂಡುಬಂದಿದ್ದು ರಾತ್ರಿ ವೇಳೆ ಕಿಡಿಗೇಡಿಗಳು ಬಂದು ಕೃತ್ಯ ನಡೆಸಿದ್ದಾರೆ. ಲಷ್ಕರ್ ಜಿಂದಾಬಾದ್ ಎನ್ನುವ ಘೋಷಣೆಯನ್ನು ಹ್ಯಾಷ್ ಟ್ಯಾಗ್ ಹಾಕಿ ಬರೆಯಲಾಗಿದೆ.  ಇಂಗ್ಲಿಷ್ ನಲ್ಲಿ Do not force us to invite Lashkar e- toiba and Taliban to deal with sanghis and manvedis ಎಂದು ಬರೆದು ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಬರೆಯಲಾಗಿದೆ. ಬೆಳಗ್ಗೆ ಈ ವಿಚಾರ ಗೊತ್ತಾಗುತ್ತಲೇ ಕದ್ರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಗೋಡೆಗೆ ಪೈಂಟ್ ಬಳಿದು ಅಳಿಸಿ ಹಾಕಿದ್ದಾರೆ. 


ಸ್ಥಳದಲ್ಲಿನ ಸಿಸಿಟಿವಿ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗೋಡೆಬರಹ ನೋಡಿದರೆ, ಯಾರೋ ಎಡಪಂಥೀಯ ಮತ್ತು ಉಗ್ರರ ಪರ ಒಲವುಳ್ಳವರು ಉದ್ದೇಶಪೂರ್ವಕ ಬರೆದಿರುವಂತಿದೆ. ತಮ್ಮನ್ನು ಕರೆಯಲು ಬಲವಂತ ಪಡಿಸಬೇಡಿ. ಲಷ್ಕರ್ ಮತ್ತು ತಾಲಿಬಾನ್ ಗಳನ್ನು ಸಂಘಿಗಳ ಜೊತೆ ಹೋಲಿಸದಿರಿ ಎಂದು ಹೇಳಿರುವ ವಿಚಾರ ಇದರಲ್ಲಿದ್ದು ಸಾರ್ವಜನಿಕರ ಗಮನ ಸೆಳೆಯಲು ಈ ರೀತಿ ಬರೆದಿದ್ದಾರೆ ಎನ್ನಲಾಗುತ್ತಿದೆ.

Some unknown miscreants have scribbled graffiti on the wall of an apartment in the city in support of lashkar e-taiba terrorist organizations near Circuit House, Mangalore.