ಬ್ರೇಕಿಂಗ್ ನ್ಯೂಸ್
02-11-20 05:50 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 02: ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವ ಇಂಧನ ಬಳಕೆಯನ್ನು ಕಡಿಮೆಗೊಳಿಸಿ ಬಯೋ ಡೀಸೆಲ್ ಉತ್ಪಾದನೆಗೆ ಒತ್ತು ಕೊಡಬೇಕೆಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಅಮೆರಿಕ, ಇಂಗ್ಲೆಂಡ್, ಜರ್ಮನಿಯಂತಹ ದೇಶಗಳು ಸಾಕಷ್ಟು ಸಂಶೋಧನೆ ನಡೆಸಿದ್ದರೂ, ಭಾರತದಲ್ಲಿ ಈ ಕುರಿತು ಹೆಚ್ಚು ಸಂಶೋಧನೆ ನಡೆದಿಲ್ಲ. ಇಂಥದ್ರಲ್ಲಿ, ಕರಾವಳಿಯ ಹಳ್ಳಿಗಾಡಿನ ಸಾಧಕರೊಬ್ಬರು ಬಯೋ ಡೀಸೆಲ್ ಉತ್ಪಾದಿಸಿ ದೇಶಕ್ಕೆ ಸ್ವಾವಲಂಬನೆಯ ಪಾಠ ಹೇಳಿದ್ದಾರೆ.
ಅದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಅಳಕೆಮಜಲು ಎಂಬಲ್ಲಿರುವ ಬಯೋ ಡೀಸೆಲ್ ಪಂಪ್. ಸುಳ್ಯ ತಾಲೂಕಿನ ಚೊಕ್ಕಾಡಿ ಗ್ರಾಮದ ನಿವಾಸಿ ಕೇಶವಮೂರ್ತಿ ಸ್ಥಾಪಿಸಿರುವ ಈ ಡೀಸೆಲ್ ಪಂಪ್ ವಿಭಿನ್ನವಾದ್ದು. ಅಂದರೆ, ಈ ಪಂಪ್ ನಲ್ಲಿ ಯಾವುದೇ ಇತರೇ ಕಂಪೆನಿಗಳ ಪೆಟ್ರೋಲ್, ಡೀಸೆಲ್ ಅನ್ನು ಮಾರಾಟ ಮಾಡಲ್ಲ. ಕೇಶವಮೂರ್ತಿ ತಮ್ಮದೇ ಫ್ಯಾಕ್ಟರಿಯಲ್ಲಿ ತರಕಾರಿ ತ್ಯಾಜ್ಯಗಳಿಂದ ಉತ್ಪಾದಿಸಿದ ಬಯೋ ಡೀಸೆಲನ್ನು ಮಾರಾಟ ಮಾಡುತ್ತಾರೆ.



ಸೋಯಾಬೀನ್, ಜೋಳ ಹಾಗೂ ಜತ್ರೋಪ ಗಿಡಗಳ ಬೀಜಗಳನ್ನು ಎಣ್ಣೆ ತಯಾರಿಕೆ ಬಳಸಲಾಗುತ್ತದೆ. ಹೀಗೆ ಎಣ್ಣೆಗೆ ಬಳಸಿದ ಬಳಿಕ ಉಳಿಯುವ ತ್ಯಾಜ್ಯಗಳನ್ನು ಬಳಸ್ಕೊಂಡು ಡೀಸೆಲ್ ತಯಾರಿಸುತ್ತೇವೆ. ನೋಡಲು ಜ್ಯೂಸ್ ತರ ಕಾಣುವ ಈ ಡೀಸೆಲ್ ಗೆ ಬೆಂಕಿ ಹತ್ತಿಕೊಳ್ಳಲ್ಲ. ಇದರಲ್ಲಿ ಗಂಧಕದ ಅಂಶ ಇರದ ಕಾರಣ ಬೆಂಕಿ ಹಾಕಿದರೂ ಉರಿಯುವುದಿಲ್ಲ ಎನ್ನುತ್ತಾ ಕೇಶವಮೂರ್ತಿ ಪ್ರಾತ್ಯಕ್ಷಿಕೆ ತೋರಿಸುತ್ತಾರೆ.
ಇಂಗ್ಲೆಂಡ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಉದ್ಯೋಗದಲ್ಲಿದ್ದ ಕೇಶವ ಮೂರ್ತಿ, ಎರಡು ವರ್ಷಗಳ ಹಿಂದಷ್ಟೇ ತಾಯ್ನಾಡಿಗೆ ಬಂದು ಸ್ವೋದ್ಯೋಗದಲ್ಲಿ ತೊಡಗಿದ್ದಾರೆ. ವಿದೇಶದಲ್ಲಿ ಪ್ರಚಲಿತದಲ್ಲಿರುವ ಬಯೋ ಡೀಸೆಲ್ ಇಲ್ಲಿ ಯಾಕೆ ಮಾಡಬಾರದು ಎಂದು ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸೋಯಾ, ಜತ್ರೋಪಾ, ಜೋಳ ಪೂರೈಕೆ ಇರುವುದರಿಂದ ಹುಬ್ಬಳ್ಳಿಯಲ್ಲಿ ಫ್ಯಾಕ್ಟರಿ ಸ್ಥಾಪಿಸಿದ್ದಾರೆ. ಸದ್ಯಕ್ಕೆ ವಿಟ್ಲದಲ್ಲಿ ಪಂಪ್ ಆರಂಭಿಸಿದ್ದು, ಮುಂದಕ್ಕೆ ಕುಮಟಾ ಮತ್ತು ತುಮಕೂರಿನಲ್ಲಿ ಆರಂಭಿಸುವ ಚಿಂತನೆ ಇದೆ ಎನ್ನುತ್ತಾರೆ. ಇತರೇ ಡೀಸೆಲಿನಿಂದ ಲೀಟರಿಗೆ ಎರಡು ರೂ. ಕಡಿಮೆ ಬೆಲೆ ಇರುವ ಈ ಬಯೋಡೀಸೆಲ್ ಬಳಕೆಯಿಂದ ವಾಹನದಲ್ಲಿ ಮೈಲೇಜ್ ಕೂಡ ಜಾಸ್ತಿ ಇದೆಯಂತೆ. ಹೀಗಾಗಿ ಕೇರಳ, ಮಂಗಳೂರಿನಿಂದ ದೂರಕ್ಕೆ ತೆರಳುವ ಮಂದಿ ಇಲ್ಲಿಯೇ ಡೀಸೆಲ್ ತುಂಬಿಕೊಂಡು ಹೋಗುತ್ತಾರೆ.


ಬಯೋ ಡೀಸೆಲ್ ಬಳಕೆಯಿಂದ ಇಂಜಿನ್ ತುಂಬ ಮೃದುವಾಗುತ್ತಿದೆ. ಸೌಂಡ್ ಬರುವುದಿಲ್ಲ ಎನ್ನುವ ಗ್ರಾಹಕರು ಕೇಶವಮೂರ್ತಿ ಪ್ರಯತ್ನಕ್ಕೆ ಶಹಭಾಷ್ ಹೇಳುತ್ತಾರೆ. ಅಲ್ಲದೆ, ರೈತರು ಬೆಳೆಯೋ ಉತ್ಪನ್ನಗಳಿಂದಲೇ ಡೀಸೆಲ್ ತಯಾರಿಸುವುದರಿಂದ ಇದಕ್ಕೆ ಸರಕಾರವೂ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ. ಅಂದಹಾಗೆ, ದೇಶದಲ್ಲಿ ಸದ್ಯಕ್ಕೆ ಕೇವಲ ನಾಲ್ಕು ಬಯೋ ಡೀಸೆಲ್ ಬಂಕ್ಗಳು ಮಾತ್ರ ಇವೆ. ನಾಲ್ಕರಲ್ಲಿ ಒಂದು ಗುಜರಾತ್ ನಲ್ಲಿದ್ದರೆ, ಉಳಿದ ಮೂರು ಕರ್ನಾಟಕದಲ್ಲಿವೆ. ಇಂಧನ ಸ್ವಾವಲಂಬನೆ ದೃಷ್ಟಿಯಿಂದ ಬಯೋ ಡೀಸೆಲ್ ಉತ್ಪಾದನೆ ಅತ್ಯಂತ ಅವಶ್ಯವಾಗಿದೆ.
Video:
State’s First Soya & Corn oil manure made Bio-Diesel fuel pump in Vitla, Mangalore by Jaychandra has created a new upliftment in the field of the fuel industry.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm