ಬ್ರೇಕಿಂಗ್ ನ್ಯೂಸ್
03-08-22 08:39 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 3: ಕೋಮು ವೈಷಮ್ಯ, ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೊರ ರಾಜ್ಯದ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಚಿಕ್ಕಮಗಳೂರು, ಉಡುಪಿ ಪೊಲೀಸರನ್ನು ಕೆಎಸ್ ಆರ್ ಪಿ ಜೊತೆಗೆ ಹೆಚ್ಚುವರಿಯಾಗಿ ಭದ್ರತಗೆ ನಿಯೋಜಿಸಲಾಗಿದೆ. ಆದರೆ ಇವರು ಊಟದ ವಿಚಾರದಲ್ಲಿ ಸುರತ್ಕಲ್ ಪೊಲೀಸ್ ಸಿಬಂದಿ ಜೊತೆಗೆ ಆಕ್ಷೇಪ ತೆಗೆದು ಬೈದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಸುರತ್ಕಲ್ ಕ್ಯಾಂಪ್ ನಲ್ಲಿ ನಿಯೋಜನೆಗೊಂಡಿದ್ದ ಚಿಕ್ಕಮಗಳೂರು ಪೊಲೀಸರು ಊಟ ತಂದುಕೊಟ್ಟಿದ್ದ ಸುರತ್ಕಲ್ ಪೊಲೀಸ್ ಸಿಬಂದಿಗೆ ಬೈದಿದ್ದು ಊಟ ಚೆನ್ನಾಗಿಲ್ಲ, ಹಳಸಿದೆ ಎಂದು ಹೇಳಿ ನಿಂದಿಸಿದ್ದಾರೆ. ಊಟದ ವಿಚಾರದಲ್ಲಿ ಆರಂಭಗೊಂಡ ಮಾತು ಆಬಳಿಕ ಬೇರೆ ವಿಚಾರಕ್ಕೆ ತಿರುಗಿದ್ದು, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಇದರ ವಿಡಿಯೋವನ್ನು ಒಬ್ಬರು ಸಿಬಂದಿಯೇ ಮಾಡಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ಬಳಿ ಕೇಳಿದಾಗ, ಊಟ ಚೆನ್ನಾಗಿತ್ತು. ಎಲ್ಲರಿಗೂ ಒಂದೇ ಕಡೆಯಿಂದ ಊಟ ಪೂರೈಕೆ ಮಾಡಲಾಗಿತ್ತು. ಎಲ್ಲ ಅಧಿಕಾರಿಗಳು, ಕೆಎಸ್ ಆರ್ ಪಿ ಸಿಬಂದಿ ಅದನ್ನೇ ಊಟ ಮಾಡಿದ್ದಾರೆ. ಊಟದ ಬಗ್ಗೆ ಕಂಪ್ಲೇಂಟ್ ಇರಲಿಲ್ಲ. ಚಿಕ್ಕಮಗಳೂರು ಪೊಲೀಸರು ಮಾತ್ರ ಆಕ್ಷೇಪ ತೆಗೆದಿದ್ದಾರೆ ಎಂದು ಹೇಳಿದರು. ಮಾಹಿತಿ ಪ್ರಕಾರ, ಊಟ ಚೆನ್ನಾಗಿಲ್ಲ, ಹಳಸಿದೆ ಎಂದು ಯಾರೋ ಕೇಳಿದ್ದಕ್ಕೆ, ನಾವು ದತ್ತಪೀಠಕ್ಕೆ ಬಂದಾಗ ಇದಕ್ಕಿಂತ ಒಳ್ಳೆ ಊಟ ಕೊಡುತ್ತೀರಾ ಎಂದು ಇಲ್ಲಿನ ಸಿಬಂದಿ ತಿರುಗೇಟು ನೀಡಿದ್ದಾರೆ. ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಹಲವರು ಸೇರಿ ಬೈದಾಡಿಕೊಂಡಿದ್ದಾರೆ.
ಪ್ರತಿ ಬಾರಿ ಕೋಮು ಗಲಭೆಯ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹೊರ ಜಿಲ್ಲೆಗಳ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸರಿಯಾದ ಸಂದರ್ಭದಲ್ಲಿ ಊಟ, ನೀರು ಸಿಗದ್ದಕ್ಕೆ ಕೆಲವೊಮ್ಮೆ ಪೊಲೀಸ್ ಸಿಬಂದಿ ಆಕ್ಷೇಪ ತೆಗೆಯುತ್ತಾರೆ. ಆದರೆ, ಇಲ್ಲಿ ಊಟದ ಜೊತೆಗೆ ಹಳೆ ವಿಚಾರವನ್ನು ಕೆದಕಿ ಬೈದುಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
Mangalore police constable and chikkamagalur police constables fighting over food alleging that spoilt food has been distributed goes viral on social media.
22-06-25 12:36 pm
HK News Desk
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
22-06-25 10:58 am
HK News Desk
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
Couple Caught at Jaipur Hotel, Video: ಹೋಟೆಲ್...
20-06-25 10:19 pm
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm