ಕುಂಬಳೆ ; ನವ ವಿವಾಹಿತ ತರುಣಿ ಆತ್ಮಹತ್ಯೆಗೆ ಶರಣು

24-07-21 12:41 pm       Headline Karnataka News Network   ಕರ್ನಾಟಕ

ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಹೆಣ್ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿದೂರಿನಲ್ಲಿ ನಡೆದಿದೆ. 

ಕಾಸರಗೋಡು, ಜುಲೈ 24: ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಹೆಣ್ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಠಾಣೆ ವ್ಯಾಪ್ತಿಯ ಕಿದೂರಿನಲ್ಲಿ ನಡೆದಿದೆ. 

ಶ್ರೇಯಾ(24) ಮೃತ ಯುವತಿ. ಆರು ತಿಂಗಳ ಹಿಂದೆ ಇವರನ್ನು ಕಿದೂರಿನ ಉದಯಕುಮಾರ್ ಎಂಬವರಿಗೆ ಮದುವೆ ಮಾಡಲಾಗಿತ್ತು. ಮದುವೆ ಬಳಿಕ ಚೆನ್ನಾಗಿಯೇ ಇದ್ದರು ಎನ್ನಲಾಗುತ್ತಿದೆ. ಆದರೆ ಇಂದು ಬೆಳಗ್ಗೆ ಪತಿಯ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ‌

ಸ್ನಾನಕ್ಕೆಂದು ಬಾತ್ ರೂಮಿಗೆ ಹೋಗಿದ್ದ ಶ್ರೇಯಾ ಮರಳಿ ಬಾರದ್ದನ್ನು ಕಂಡು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿರುವುದು ಕಂಡುಬಂದಿದೆ. ಬಳಿಕ ಪೊಲೀಸರು ಬಂದು ‌ಪರಿಶೀಲನೆ ನಡೆಸಿದ್ದಾರೆ‌. ಯುವತಿ ಶವವನ್ನು ಪೋಸ್ಟ್ ಮಾರ್ಟಂ ನಡೆಸಲು ಕಾಸರಗೋಡು ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿದೆ. ಘಟನೆ ಬಗ್ಗೆ ಪೊಲೀಸರು ಪತಿಯನ್ನು ವಿಚಾರಣೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿದ್ದಾರೆ.

Newly married girl commits suicide in Kumble Kasaragod. The deceased has been identified as Shreya (24). She committed suicide at her husbands house.