ಬ್ರೇಕಿಂಗ್ ನ್ಯೂಸ್
12-06-21 11:37 am Headline Karnataka News Network ಕರ್ನಾಟಕ
ಚಿಕ್ಕಬಳ್ಳಾಫುರ, ಜೂನ್ 12: ಲಾಕ್ಡೌನ್ ಕಾರಣದಿಂದಾಗಿ ಟೊಮ್ಯಾಟೊ ಧಾರಣೆಯಲ್ಲಿ ತೀವ್ರ ಕುಸಿತವಾಗಿದ್ದು ರೈತರು ತಾವು ಬೆಳೆದ ಟೊಮ್ಯಾಟೋವನ್ನು ರಸ್ತೆಗೆ ಸುರಿದು ಹೋಗಿದ್ದಾರೆ.
ಟೊಮ್ಯಾಟೋವನ್ನು ಕೊಳ್ಳುವವರೇ ಇಲ್ಲದೆ, ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆ ಹೊರಗಡೆ ರಸ್ತೆಯಲ್ಲಿ ಸುರಿಯಲಾಗಿದೆ. ರಸ್ತೆಗೆ ಸುರಿದಿರುವ ಟೊಮ್ಯಾಟೋ ರಾಶಿ ದನಗಳಿಗೂ ಬೇಡವಾಗಿದೆ. ರಾಶಿ ಹಾಕಿದ ಹಸಿ ಹಸಿ ಟೊಮ್ಯಾಟೋ ಹಣ್ಣುಗಳನ್ನು ಹಸುಗಳು ತಿನ್ನುತ್ತಿದ್ದು ಹೊಟ್ಟೆ ತುಂಬಿದ ಬಳಿಕ ಹಾಗೇ ಬಿಟ್ಟುಬಿಟ್ಟಿದೆ.
ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ 15 ಕೇಜಿಯ ಟೊಮ್ಯಾಟೋ ಬಾಕ್ಸಿಗೆ ಕೇವಲ 50 ರೂ. ಬೆಲೆಯಿದ್ದು ಅಷ್ಟಕ್ಕೂ ಕೊಳ್ಳುವವರಿಲ್ಲದಂತಾಗಿದೆ. ಹೀಗಾಗಿ ರಾಶಿ ರಾಶಿ ಟೊಮ್ಯಾಟೋಗಳನ್ನು ಎಪಿಎಂಸಿ ಮಾರುಕಟ್ಟೆಗೆ ರೈತರು ಹೊರಗಡೆ ಸುರಿದು ಹೋಗಿದ್ದಾರೆ. ಕೇಜಿ ಟೊಮ್ಯಾಟೋ ಬೆಲೆ 3 ರೂಪಾಯಿಗೆ ಕುಸಿದಿದ್ದು ಪಿಕಪ್, ಟೆಂಪೋಗಳಲ್ಲಿ ಮಾರುಕಟ್ಟೆಗೆ ತಂದವರು ವಾಹನ ಬಾಡಿಗೆಯ ಹಣವೂ ಸಿಗದೆ ಕಂಗಾಲಾಗಿದ್ದಾರೆ.





ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆಯ ಹೊರಗಡೆಯಲ್ಲಿ ರಾಶಿಗಟ್ಟಲೆ ಟೊಮ್ಯಾಟೋ ಬಿದ್ದಿದ್ದು ರೈತರ ಸ್ಥಿತಿ ಹೀನಾಯ ಎನ್ನುವಂತಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಲ್ಲಿ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಿದ್ದು ಈಗ ಬೆಳೆಯ ಸೀಸನ್. ಆದರೆ, ಲಾಕ್ಡೌನ್ ಕಾರಣದಿಂದಾಗಿ ಟೊಮ್ಯಾಟೋಗೆ ಬೆಲೆ ಇಲ್ಲದೆ, ರೈತರು ಕಂಗಾಲಾಗಿದ್ದು ವಾಹನಗಳಲ್ಲಿ ತಂದ ಬೆಳೆಯನ್ನು ದಿನವೂ ರಸ್ತೆಯಲ್ಲೇ ಸುರಿದು ಹೋಗುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗಿಲ್ಲದ ಪರಿಸ್ಥಿತಿ. ಸರಕಾರದ ಕಡೆಯಿಂದ ರೈತರಿಂದ ನೇರವಾಗಿ ಖರೀದಿಸಿ ತಲುಪಿಸುವ ಕಾರ್ಯ ಮಾಡಬಹುದು. ಆದರೆ, ಎಪಿಎಂಸಿಯಾಗಲೀ, ಇತರೇ ಮಾರುಕಟ್ಟೆ ವ್ಯಾಪಾರಸ್ಥರಾಗಲೀ ಆ ಕೆಲಸವನ್ನು ಮಾಡಿಲ್ಲ.
Video: Click
Supply chain distortion of farm produce owing to the lockdown over COVID-19 has hurt both farmers and consumers. There have been reports from across the state of farmers, in despair, destroying their own crop in chikkaballapur
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm