ಬ್ರೇಕಿಂಗ್ ನ್ಯೂಸ್
10-06-21 10:53 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜೂನ್ 10: ಲಾಕ್ಡೌನ್ ಹೇರಿದ ಬಳಿಕ ರಾಜ್ಯದಾದ್ಯಂತ ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳನ್ನು ದಂಡ ಪಡೆದು ಬಿಟ್ಟು ಬಿಡುವಂತೆ ಹೈಕೋರ್ಟ್ ಆದೇಶ ಮಾಡಿದೆ. ಇದರಿಂದ ರಾಜ್ಯದಲ್ಲಿ ಒಂದೂವರೆ ಲಕ್ಷ ವಾಹನಗಳು ಪೊಲೀಸರ ಕೈಯಿಂದ ಬಿಡುಗಡೆ ಭಾಗ್ಯ ಪಡೆಯಲಿವೆ.
ಲಾಕ್ಡೌನ್ ಉಲ್ಲಂಘಿಸಿದ ನೆಪದಲ್ಲಿ ರಾಜ್ಯದಲ್ಲಿ ವಿವಿಧೆಡೆ ಪೊಲೀಸರು ಸಾರ್ವಜನಿಕರ ವಾಹನಗಳನ್ನು ಜಪ್ತಿ ಮಾಡಿ ಕೇಸು ದಾಖಲಿಸಿದ್ದರು. ಇದರಿಂದ ರಾಜ್ಯದಲ್ಲಿ ಅಂದಾಜು 1.51 ಲಕ್ಷ ವಾಹನಗಳು ಸೀಜ್ ಆಗಿದ್ದು ಅಡಕತ್ತರಿಗೆ ಸಿಲುಕಿದ್ದವು.
ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದ ವಾಹನಗಳನ್ನು ದಂಡ ಪಡೆದು ಬಿಟ್ಟು ಬಿಡುವಂತೆ ಇದೀಗ ಕೋರ್ಟ್ ಸೂಚನೆ ನೀಡಿದೆ. ಇದರ ಪ್ರಕಾರ, 1.37 ಲಕ್ಷ ದ್ವಿಚಕ್ರ ವಾಹನಗಳು ತಲಾ 500 ರೂ. ದಂಡ ಭರಿಸಬೇಕು. 7400 ನಾಲ್ಕು ಚಕ್ರದ ವಾಹನಗಳು ಒಂದು ಸಾವಿರ ರೂ. ದಂಡ, 7100 ಇತರ ಮಾದರಿಯ ವಾಹನಗಳು ರೂ. 2 ಸಾವಿರ ದಂಡ ತೆರಬೇಕು. ಇದರ ಜೊತೆಗೆ ಸೆಕ್ಷನ್ 102(3) ಪ್ರಕಾರ ಬಾಂಡ್ ನೀಡಬೇಕಿದೆ.
ಬಾಂಡ್ ಪ್ರಕಾರ, ವಾಹನಗಳ ಮಾಲೀಕರು ಇನ್ನು ಯಾವುದೇ ರೀತಿಯಲ್ಲಿ ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಬಾರದು ಎಂದು ಷರತ್ತು ಬರೆಸಿಕೊಂಡು ಪೊಲೀಸರು ವಾಹನಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಮತ್ತು ಜಸ್ಟಿಸ್ ಅರವಿಂದ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ದೊಡ್ಡ ಮಟ್ಟದಲ್ಲಿ ವಾಹನಗಳು ಸೀಜ್ ಆಗಿರುವುದರಿಂದ ಅದನ್ನು ಪಾರ್ಕ್ ಮಾಡಿ ಇಟ್ಟುಕೊಳ್ಳುವುದು ಕಷ್ಟವಾಗಿದ್ದಲ್ಲದೆ, ಲಕ್ಷಾಂತರ ಸಂಖ್ಯೆಯ ವಾಹನಗಳ ಕೇಸನ್ನು ನ್ಯಾಯಾಲಯಕ್ಕೆ ಹಸ್ತಾಂತರ ಮಾಡಿದರೆ ಅದನ್ನು ಪರಿಹರಿಸುವುದು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರವೇ ಹೈಕೋರ್ಟಿಗೆ ಮನವಿ ಮಾಡಿತ್ತು. ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ದಂಡ ಪಡೆದು ವಾಹನ ರಿಲೀಸ್ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡಿತ್ತು.
ಸಾಮಾನ್ಯವಾಗಿ ವಾಹನಗಳ ಮಾಲೀಕರು ಕೋರ್ಟಿಗೆ ಅರ್ಜಿ ಸಲ್ಲಿಸಿ, ಬಿಡಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಸಮಯವೂ ಹಿಡಿಯುತ್ತದೆ. ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಸೆಕ್ಷನ್ 188 (ಪೊಲೀಸರ ಸೂಚನೆ ಪಾಲಿಸದಿರುವುದು) ಮತ್ತು ಇದರ ಜೊತೆಗೆ 2005 ರ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೆಕ್ಷನ್ 51(1) ಬಿ ಅಡಿ (ಸರಕಾರದ ಆದೇಶ ಉಲ್ಲಂಘನೆ) ಪ್ರಕರಣ ದಾಖಲಿಸಿರುತ್ತಾರೆ. ಈ ಸೆಕ್ಷನ್ ಅಡಿ ಆರೋಪಗಳಿಗೆ ಆರು ತಿಂಗಳು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇರುತ್ತದೆ
In a partial relief to owners of around 1.51 lakh motor vehicles seized for violation of the recent lockdown norms across the State, the High Court of Karnataka on Tuesday permitted the jurisdictional police to release the vehicles by collecting a tentative fine amount as deposit.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm