ಬ್ರೇಕಿಂಗ್ ನ್ಯೂಸ್
13-02-26 11:52 am HK News Desk ಕ್ರೈಂ
ನವದೆಹಲಿ, ಫೆ.12: ಡಿಜಿಟಲ್ ವಂಚನೆ ಪ್ರಕರಣಗಳು ಜಗತ್ತಿನಾದ್ಯಂತ ಹೆಚ್ಚುತ್ತಿರುವಾಗಲೇ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆಯನ್ನು ತೆರೆದು ಅದರ ಮೂಲಕವೇ ಸೈಬರ್ ವಂಚನಾ ಜಾಲ ನಡೆಸುತ್ತಿದ್ದುದನ್ನು ತನಿಖಾ ತಂಡ ಪತ್ತೆಹಚ್ಚಿದೆ.
ವಿಯೆಟ್ನಾಂ ಗಡಿಗೆ ಹೊಂದಿಕೊಂಡಿರುವ ಕಾಂಪೊಟ್ ಪ್ರಾಂತ್ಯದಲ್ಲಿ 'ಡಿಜಿಟಲ್ ಅರೆಸ್ಟ್' ಸೇರಿ ವಿವಿಧ ಬಗೆಯ ವಂಚನೆ ಚಟುವಟಿಕೆ ನಡೆಸುತ್ತಿದ್ದ ಖತರ್ನಾಕ್ ಜಾಲವನ್ನು ವಿಯೆಟ್ನಾಂ ಪೊಲೀಸ್ ಪಡೆ ಪತ್ತೆ ಮಾಡಿದೆ. ಅಂತಾರಾಷ್ಟ್ರೀಯ ವಂಚನೆಗಳಿಗೆ ತಡೆ ಹಾಕಲು ಕಾಂಬೋಡಿಯಾ ಪೊಲೀಸರು ಇತ್ತೀಚೆಗೆ ಭಾರಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 190 ಸ್ಕ್ಯಾಮ್ ಸೆಂಟರ್ಗಳನ್ನು ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ. 173 ಅಧಿಕಾರಿ ಸೋಗಿನಲ್ಲಿದ್ದ ಸೈಬರ್ ವಂಚಕರನ್ನೂ ಬಂಧಿಸಲಾಗಿದೆ. ಈ ಸೆಂಟರ್ಗಳನ್ನು ಭಾರತೀಯ ಪೊಲೀಸ್ ಠಾಣೆಯೆಂದು ಬಿಂಬಿಸಿ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಭಾರತೀಯರೇ ಟಾರ್ಗೆಟ್ !
ಸೈಬರ್ ಜಾಲದ ಸೂತ್ರಧಾರಿ ಚೀನಾ ಮೂಲದ ಕಿಂಗ್ ಪಿನ್ ಲೀ ಕುಯಾಂಗ್ ಎಂದು ಶಂಕಿಸಲಾಗಿದೆ. ನಕಲಿ ಪೊಲೀಸ್ ಠಾಣೆಯು ಸಿನಿಮಾ ಸೆಟ್ ರೀತಿಯಿದ್ದು ಪಾಳುಬಿದ್ದ ಕಟ್ಟಡ, ಕಾಂಪೌಂಡ್ನಲ್ಲಿ ತಾತ್ಕಾಲಿಕ ಎನ್ನುವಂತೆ ನಿರ್ಮಿಸಲಾಗಿದೆ. ಇದರಲ್ಲಿ ಮುಂಬಯಿ ಪೊಲೀಸ್ ಹಾಗೂ ಸಿಬಿಐ ಲೋಗೊಗಳಿರುವ ನಕಲಿ ಸೈನ್ ಬೋರ್ಡ್ ಗಳಿವೆ. ಎರಡೂ ಬದಿಯಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಹಾಗೂ ಭಾರತದ ರಾಷ್ಟ್ರಧ್ವಜವನ್ನು ಅಳವಡಿಸಲಾಗಿದೆ. ವಿದೇಶಗಳಲ್ಲಿರುವ ಭಾರತೀಯರನ್ನು 'ಡಿಜಿಟಲ್ ಅರೆಸ್ಟ್' ಹೆಸರಲ್ಲಿ ವಂಚಿಸುವ ಜಾಲ ಇದಾಗಿದೆ ಎಂದು ವಿಯೆಟ್ನಾಂ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಪೊಲೀಸರು ನೇಪಾಳದಲ್ಲಿದ್ದುಕೊಂಡು ಸೈಬರ್ ವಂಚನೆ ನಡೆಸುತ್ತಿದ್ದ ಜಾಲವನ್ನು ಭೇದಿಸಿದ್ದರು. ಈ ವೇಳೆ, ಇವರಿಗೆ ಕಾಂಬೋಡಿಯಾದಲ್ಲಿ ನೆಟ್ವರ್ಕ್ ಇರೋದು, ಹಣವನ್ನು ಯುಎಸ್ ಡಾಲರಿಗೆ ಪರಿವರ್ತಿಸುವ ಜಾಲ ಇರುವುದು ತಿಳಿದುಬಂದಿತ್ತು. ಮಲೇಶಿಯಾ, ಥಾಯ್ಲೆಂಡಿಗೆ ಉದ್ಯೋಗಕ್ಕೆ ತೆರಳುವ ಭಾರತೀಯರನ್ನೇ ಬಳಸಿಕೊಂಡು ಸೈಬರ್ ವಂಚನಾ ಜಾಲ ನಡೆಸುತ್ತಿರುವುದೂ ಪತ್ತೆಯಾಗಿತ್ತು.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
14-06-26 09:47 pm
HK News Staffer
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
15-06-26 11:50 am
HK News Staffer
ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರು...
15-06-26 11:27 am
ರೇಣುಕಾಸ್ವಾಮಿ ಕೇಸ್ ಮಾದರಿಯಲ್ಲೇ ಬಳ್ಳಾರಿಯಲ್ಲಿ ಭೀಕ...
14-06-26 10:30 pm
ಮಂಜೇಶ್ವರ; ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಾಲಕಿಯರು...
14-06-26 05:08 pm
ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಅಪಪ್ರಚಾರ; ಸ್ನೇಹಿ...
13-06-26 09:17 pm