ಬ್ರೇಕಿಂಗ್ ನ್ಯೂಸ್
13-01-26 05:28 pm HK News Desk ಕ್ರೈಂ
ಧಾರವಾಡ, ಜ 13 : ಗುತ್ತಿಗೆದಾರನನ್ನು ಕೊಲೆ ಮಾಡಿ ಬಿಲ್ಡಿಂಗ್ ಮೇಲಿಂದ ಕಾಲು ಜಾರಿ ಬಿದ್ದಿದ್ದಾರೆ ಎಂದು ಬಿಂಬಿಸಲು ಹೋಗಿ ಮೂವರು ಜೈಲು ಪಾಲಾದ ಘಟನೆ ಕಾನೂನು ವಿವಿ ಹತ್ತಿರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಿಕೋಟಾದ ವಿಠಲ ರಾಥೋಡ್ (65) ಕೊಲೆಯಾದ ವ್ಯಕ್ತಿ. ಮೇಘವ ಸತನಾಮಿ (50) ಭಗವಾನ ದಾಸ ಸತನಾಮಿ (21), ವಿಮಲಾ ಸತನಾಮಿ (41) ಆರೋಪಿಗಳು. ಇವರೆಲ್ಲ ಸೇರಿಕೊಂಡು ವಿಠ್ಠಲ ರಾಥೋಡ್ ಅನ್ನು ಕೊಲೆ ಮಾಡಿ ಕಟ್ಟಡದ ಮೇಲಿಂದ ಬಿದ್ದಿದ್ದಾರೆ, ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೃತನ ಮಗನಿಗೆ ಕರೆ ಮಾಡಿ ತಿಳಿಸಿದ್ದಾರೆ.

ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಲ್ಲಿದ್ದವರನ್ನು ವಿಚಾರಣೆ ನಡೆಸಿದಾಗ ಘಟನೆ ಆಕಸ್ಮಿಕವಾಗಿರದೇ ಕೊಲೆ ಎಂದು ಗೊತ್ತಾದ ಮೇಲೆ ಈ ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರೆಸಿದ್ದಾರೆ.
ಮೂವರು ಆರೋಪಿಗಳು ಛತ್ತೀಸ್ಗಡ ಮೂಲದವರಾಗಿದ್ದು, ಮೃತ ವಿಠ್ಠಲ ರಾಥೋಡ್ ಬಳಿ ನಾಲ್ಕೈದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ವಿಮಲಾ ಸತನಾಮಿ ಜೊತೆಗೆ ಮೃತ ವಿಠ್ಠಲ ರಾಥೋಡ್ ಆತ್ಮೀಯತೆಯಿಂದ ಇರುವುದೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್, "ಕಾನೂನು ವಿವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಆಡಳಿತ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಅದರಲ್ಲಿ ಕೆಲಸ ಮಾಡುತ್ತಿದ್ದಂತಹ ಮೂರು ಜನ ಕಾರ್ಮಿಕರು ಹಾಗೂ ಕಾರ್ಮಿಕ ಗುತ್ತಿಗೆದಾರ ವಿಠ್ಠಲ ರಾಥೋಡ್ ನಡುವೆ ಜ. 10ರಂದು ರಾತ್ರಿ ಜಗಳವಾಗಿದೆ. ಜಗಳ ತಾರಕಕ್ಕೇರಿ ಅಲ್ಲಿದ್ದ ಮಹಿಳೆಯ ಮಗ ವಿಠ್ಠಲ್ ರಾಥೋಡ್ ಮೇಲೆ ಹಲ್ಲೆ ಮಾಡಿದ್ದಾನೆ. ಮೂರೂ ಜನ ಸೇರಿ ಆತ ಕಟ್ಟಡದ ಮೇಲಿಂದ ಬಿದ್ದಿದ್ದಾರೆ ಎಂಬ ರೀತಿ ಬಿಂಬಿಸುತ್ತಾರೆ. ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದಾಗಲೂ, ಆರೊಪಿಗಳು ಅಲ್ಲಿಯೂ ಅದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ವೇಳೆ ನಮ್ಮ ಅಧಿಕಾರಿಗಳಿಗೆ ಅಲ್ಲಿ ಕಟ್ಟಡದಿಂದ ಬಿದ್ದು ಪೆಟ್ಟಾಗುವಂತೆ ಇಲ್ಲ ಎಂಬ ಸಂಶಯ ಬಂದಿದೆ. ಇದೇ ಆಧಾರದ ಮೇಲೆ ಸಂಶಯಾತ್ಮಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಯಿತು" ಎಂದು ತಿಳಿಸಿದ್ದಾರೆ.
"ಮೇಘವ್ ಸತನಾಮಿ, ಆತನ ಪತ್ನಿ ವಿಮಲಾ ಸತನಾಮಿ ಹಾಗೂ ಮಗ ಭಗವಾನ ದಾಸ ಸತನಾಮಿ, ಛತ್ತೀಸ್ಗಡ ಮೂಲದವರು. ಇದೇ ಗುತ್ತಿಗೆದಾರ ಜೊತೆ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರ ವಿಠ್ಠಲ್ ರಾಥೋಡ್ಗೆ ವಿಮಲಾ ಜೊತೆ ಹೆಚ್ಚು ಆತ್ಮೀಯತೆ ಇತ್ತು ಎಂದು ವಿಮಲಾಳ ಗಂಡ ಹಾಗೂ ಮಗ ಯಾವಾಗಲೂ ವಿರೋಧಿಸುತ್ತಾ ಇರುತ್ತಾರೆ. ಇದೇ ವಿಷಯಕ್ಕೆ ಮೊನ್ನೆ ಆದಂತಹ ಸಂಘರ್ಷದಲ್ಲಿ ಆತನಿಗೆ ಪೆಟ್ಟು ಬಿದ್ದಿದೆ. ನಂತರ ಆತ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ" ಎಂದು ಮಾಹಿತಿ ನೀಡಿದರು.
In a shocking incident near Karnataka Law University in Dharwad, three people were arrested for murdering a contractor and attempting to portray the crime as an accidental fall from a building under construction. The victim, 65-year-old Vithal Rathod from Vijayapura district, was allegedly killed following a dispute triggered by his alleged illicit relationship with one of the accused woman, Vimala Satanami.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am