ಬ್ರೇಕಿಂಗ್ ನ್ಯೂಸ್
27-11-25 09:07 pm Mangalore Correspondent ಕ್ರೈಂ
ಮಂಗಳೂರು, ನ.27 : ಹೊರಗುತ್ತಿಗೆ ಸಿಬಂದಿಯೊಬ್ಬರ ಸಂಬಳವನ್ನು ನೀಡುವುದಕ್ಕಾಗಿ ಲಂಚ ಕೇಳಿ, 30 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಉಳ್ಳಾಲ ಮತ್ತು ಮಂಗಳೂರು ತಾಲೂಕಿನ ಭೂ ದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕ ಸೇರಿ ಮೂವರು ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ನಗರ ಆಸ್ತಿ ಮಾಲೀಕತ್ವ ದಾಖಲೆ (ಯುಪಿಓಆರ್) ಯೋಜನೆಯಲ್ಲಿ ಹೊರ ಗುತ್ತಿಗೆ ಸಿಬಂದಿಯಾಗಿದ್ದ ವ್ಯಕ್ತಿಯೊಬ್ಬರನ್ನು ಕೆಲಸದಲ್ಲಿ ಮುಂದುವರಿಸುವುದು ಮತ್ತು ಬಾಕಿಯಿರುವ ಸಂಬಳದ ಮೊತ್ತವನ್ನು ಮಾಡಿಕೊಡಲು ಭೂ ದಾಖಲೆಗಳ ಅಧಿಕಾರಿಗಳು ಲಂಚದ ಬೇಡಿಕೆಯೊಡ್ಡಿದ್ದರು. ಉಳ್ಳಾಲದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸರ್ವೇಯರ್ ಕೃಷ್ಣಮೂರ್ತಿ 50 ಸಾವಿರ, ಮಂಗಳೂರು ತಾಲೂಕು ಸರ್ವೆ ವಿಭಾಗದ ಸಹಾಯಕ ನಿರ್ದೇಶಕ ಬಿ.ಕೆ ರಾಜು 10 ಸಾವಿರ, ಸರ್ವೆ ಸುಪರ್ ವೈಸರ್ ಎಸ್.ಧನಶೇಖರ ರೂ. 10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು.
ಈ ಬಗ್ಗೆ ದೂರು ಪಡೆದ ಲೋಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿದ್ದು, ನ.27ರ ಗುರುವಾರ ಸಂತ್ರಸ್ತ ವ್ಯಕ್ತಿಯಿಂದ ಲಂಚದ ಹಣ 30 ಸಾವಿರವನ್ನು ಪಡೆಯುತ್ತಿದ್ದಾಗಲೇ ಅರೆಸ್ಟ್ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ.ಕುಮಾರಿ, ಸುರೇಶ್ ಕುಮಾರ್, ಪೊಲೀಸ್ ನಿರೀಕ್ಷಕರಾದ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್, ರಾಜೇಂದ್ರ ನಾಯ್ಡು ಸಿಬಂದಿಗಳ ಜೊತೆ ಭಾಗವಹಿಸಿದ್ದರು.
The Lokayukta officials arrested three officers from the land records (survey) department of Ullal and Mangaluru taluk for allegedly demanding and accepting a bribe of ₹30,000. The officers had reportedly demanded money to continue the service of an outsourced employee working under the ULPOR (Urban Property Ownership Record) project and to release his pending salary.
27-11-25 10:23 pm
HK News Desk
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗೆ ರೆಡಿಯಾಗುತ್ತಿದ...
27-11-25 08:14 pm
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ; ಕುಟುಂಬಸ...
27-11-25 06:30 pm
ಕಾಂಗ್ರೆಸ್ ಕಚ್ಚಾಟದಲ್ಲಿ ಯಾರು ಹೊರಬಂದರೂ ಬಿಜೆಪಿ ಬೆ...
27-11-25 04:27 pm
ಹೊಸಕೋಟೆ ಬಳಿ KSRTC ಬಸ್ ಹಾಗೂ ಕ್ಯಾಂಟರ್ ನಡುವೆ ಭೀ...
27-11-25 12:56 pm
26-11-25 07:16 pm
HK News Desk
ಅಯೋಧ್ಯೆಯಲ್ಲಿ ಹತ್ತಡಿ ಎತ್ತರದ ಬೃಹತ್ ಭಗವಾಧ್ವಜ ಅನಾ...
25-11-25 04:30 pm
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
ಬಾಲಿವುಡ್ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತ...
24-11-25 03:37 pm
Explosives Gelatin Sticks, High Alert in Utta...
23-11-25 09:21 pm
26-11-25 07:21 pm
Mangalore Correspondent
ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಮೋದಿ ರೋಡ್ ಶ...
26-11-25 03:34 pm
ಪ್ರಧಾನಿ ಮೋದಿ ಆಗಮನದಿಂದ ಸಂಚಾರ ತೊಡಕು ; ನ.28ರಂದು...
25-11-25 10:51 pm
ಪುಸ್ತಕ ಮೇಳದಲ್ಲಿ ಸಾಹಿತಿಗಳ ಗೌರವಕ್ಕಾಗಿ 25 ಸಾವಿರದ...
25-11-25 10:07 pm
ಕ್ಯಾಂಪ್ಕೋ ಆಡಳಿತ ಮಂಡಳಿಗೆ ಚುನಾವಣೆ ; ಸಹಕಾರ ಭಾರತಿ...
25-11-25 09:53 pm
27-11-25 09:14 pm
Mangalore Correspondent
ಹೊರ ಗುತ್ತಿಗೆ ಸಿಬಂದಿ ಸಂಬಳ ಪಾವತಿಗೆ 30 ಸಾವಿರ ಲಂಚ...
27-11-25 09:07 pm
ಧರ್ಮಸ್ಥಳದಲ್ಲಿ ಭಕ್ತರ ಬ್ಯಾಗ್ ನಿಂದ ಚಿನ್ನಾಭರಣ ಕಳವ...
26-11-25 10:43 pm
Mangalore Crime, Ullal Police: 916 ಹಾಲ್ ಮಾರ್ಕ...
26-11-25 06:26 pm
ಲಂಡನ್ ಲೇಡಿಯೆಂದು ಹೇಳಿ ವಂಚನೆ ; 30 ಲಕ್ಷದ ಪೌಂಡ್ಸ್...
26-11-25 02:39 pm