ಬ್ರೇಕಿಂಗ್ ನ್ಯೂಸ್
14-10-23 10:36 pm HK News Desk ಕ್ರೀಡೆ
ಅಹ್ಮದಾಬಾದ್, ಅ.14: ನಾಯಕ ರೋಹಿತ್ ಶರ್ಮಾ (86) ಮತ್ತು ಶ್ರೇಯಸ್ ಅಯ್ಯರ್ (53*) ಅಮೋಘ ಬ್ಯಾಟಿಂಗ್ ಬಲದಿಂದ ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಅಹ್ಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ನೀಡಿದ್ದ 192 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡವು ಸುಲಭ ಗೆಲುವು ಸಾಧಿಸಿದೆ. ಆರಂಭದಲ್ಲಿ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ತಲಾ 16 ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದರೂ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರ ಶತಕದ ಜೊತೆಯಾಟದಿಂದ ಟೀಮ್ ಇಂಡಿಯಾ ಕೇವಲ 30.3 ಓವರ್ಗಳಿಗೆ 192 ರನ್ ಗಳಿಸಿ 7 ವಿಕೆಟ್ ಇರುವಾಗಲೇ ಗೆದ್ದು ಬೀಗಿತು.
ಅಫಘಾನಿಸ್ತಾನ ವಿರುದ್ದ ಸ್ಪೋಟಕ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ಎದುರು ಕೂಡ ಅದೇ ರೀತಿಯ ಆಟದ ಲಯವನ್ನು ಮುಂದುವರಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ರೋಹಿತ್, 63 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 86 ರನ್ ಸಿಡಿಸಿ ತಂಡಕ್ಕೆ ಸುಲಭದ ಗೆಲುವು ದಾಖಲಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದಿದ್ದ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆದರೂ ಭಾರತೀಯ ಶಿಸ್ತುಬದ್ದ ಬೌಲಿಂಗ್ ದಾಳಿಗೆ ನಲುಗಿ 42.5 ಓವರ್ಗಳಿಗೆ 191 ರನ್ಗಳಿಗೆ ಆಲ್ಔಟ್ ಆಗಿತ್ತು. ಆ ಮೂಲಕ ಭಾರತ ತಂಡಕ್ಕೆ ಕೇವಲ 192 ರನ್ಗಳ ಸಾಧಾರಣ ಗುರಿ ನೀಡಿತ್ತು. ಕರಾರುವಾಕ್ ಬೌಲಿಂಗ್ ಮಾಡಿದ್ದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪುರಸ್ಕಾರ ಪಡೆದರು. ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವಂತಾಗಿತ್ತು.
42.5 ಓವರ್ಗಳಿಗೆ ಪಾಕಿಸ್ತಾನ 191ಕ್ಕೆ ಆಲೌಟ್ (ಬಾಬರ್ ಆಝಮ್ 50, ಮೊಹಮ್ಮದ್ ರಿಝ್ವಾನ್ 49, ಇಮಾಮ್ ಉಲ್ ಹಕ್ 36; ಜಸ್ಪ್ರೀತ್ ಬುಮ್ರಾ 19ಕ್ಕೆ 2, ಹಾರ್ದಿಕ್ ಪಾಂಡ್ಯ 34ಕ್ಕೆ 2, ಕುಲ್ದೀಪ್ ಯಾದವ್ 35ಕ್ಕೆ 2, ಮೊಹಮ್ಮದ್ ಸಿರಾಜ್ 50ಕ್ಕೆ 2, ರವೀಂದ್ರ ಜಡೇಜಾ 38ಕ್ಕೆ 2)
ಭಾರತ 30.3 ಓವರ್ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 192 (ರೋಹಿತ್ ಶರ್ಮಾ 86, ಶ್ರೇಯಸ್ ಅಯ್ಯರ್ 53*; ಶಾಹೀನ್ ಶಾ ಅಫ್ರಿದಿ 36ಕ್ಕೆ 2, ಹಸನ್ ಅಲಿ 34ಕ್ಕೆ 1)
Rohit Sharma's 86 off just 63 balls took India to a great seven-wicket over Pakistan at the Narendra Modi Stadium in Ahmedabad on Saturday, October 14 in the ICC Cricket World Cup 2023. In what is seen as the pinnacle of cricket by fans in the subcontinent, Indian captain Rohit emerged as the undisputed star of the match as he powered his team to the modest target of 192 with as many as 19.3 overs to spare.
27-04-24 07:50 pm
HK News Desk
Work From Traffic, Bangalore: ಬೆಂಗಳೂರು ಟ್ರಾಫಿ...
27-04-24 06:55 pm
Accident in Kalaburagi: ಕಲಬುರಗಿಯಲ್ಲಿ ಭೀಕರ ರಸ...
27-04-24 03:30 pm
Snake bite, Bangalore: ಆಟ ಆಡುತ್ತಿದ್ದಾಗ ಕಚ್ಚಿದ...
27-04-24 02:10 pm
ರಾಜ್ಯದ 14 ಕ್ಷೇತ್ರದಲ್ಲಿ ಶೇ. 69.23ರಷ್ಟು ಮತದಾನ,...
26-04-24 11:17 pm
27-04-24 05:46 pm
HK News Desk
Sunny Leone in Kasaragod: ಮಾದಕ ನಟಿ ಸನ್ನಿ ಲಿಯೋ...
27-04-24 03:13 pm
Arvind Kejriwal, Delhi High Court : ಜೈಲಿನಲ್ಲಿ...
27-04-24 02:20 pm
ಅಗ್ನಿ ಅವಘಡ ; ನವ ದಂಪತಿ ಸೇರಿ 6 ಮಂದಿ ಸಜೀವ ದಹನ, ಮ...
26-04-24 02:58 pm
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
27-04-24 06:40 pm
Mangalore Correspondent
Kadaba Wedding, Mangalore: ತಾಳಿ ಕಟ್ಟುವ ಶುಭ ವೇ...
27-04-24 05:31 pm
Sullia Banjarumale, Voting: ಪಶ್ಚಿಮ ಘಟ್ಟಗಳ ನಡು...
26-04-24 10:45 pm
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
27-04-24 02:53 pm
HK News Desk
Bangalore crime, Divorce: ಇನ್ನೊಬ್ಬಳ ಜೊತೆ ಪತಿಯ...
27-04-24 01:37 pm
Mangalore crime, stabbed, Pawan: ಫರಂಗಿಪೇಟೆ ;...
26-04-24 03:59 pm
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm