Mangalore Accident, Thokottu: ತೊಕ್ಕೊಟ್ಟು ಹೆದ್ದಾರಿಯಲ್ಲಿ ಮಧ್ಯರಾತ್ರಿ ಕಾರಿನ ಅವಾಂತರ ; ಚುರುಮುರಿ ಗೂಡಂಗಡಿ ಉಡೀಸ್ ಮಾಡಿ ಮರಕ್ಕೆ ಡಿಕ್ಕಿ! ಕಾರಿನ ಧಾವಂತಕ್ಕೆ ಬೀದಿ ನಾಯಿ ಬಲಿ, ಸವಾರರು ಪ್ರಾಣಾಪಾಯದಿಂದ ಪಾರು 

10-05-24 12:39 pm       Mangalore Correspondent   ಕರಾವಳಿ

ನಿಯಂತ್ರಣ ತಪ್ಪಿದ ಕಾರೊಂದು ಚುರುಮುರಿ ವ್ಯಾಪಾರದ ಗೂಡಂಗಡಿಗೆ ಢಿಕ್ಕಿ ಹೊಡೆದು ಅಂಗಡಿಯನ್ನ ಉಡೀಸ್ ಮಾಡಿದ್ದಲ್ಲದೆ, ಮರಕ್ಕೆ ಢಿಕ್ಕಿ ಹೊಡೆದು ನಜ್ಜುಗುಜ್ಜಾಗಿದ್ದು , ಕಾರಿನ ಧಾವಂತಕ್ಕೆ ಬೀದಿ ನಾಯಿಯೊಂದು ಬಲಿಯಾದ ಘಟನೆ ರಾ.ಹೆ.66 ರ ಅಂಬಿಕಾ ರೋಡ್ ಎಂಬಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಮೂವರು ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಳ್ಳಾಲ, ಮೇ.10: ನಿಯಂತ್ರಣ ತಪ್ಪಿದ ಕಾರೊಂದು ಚುರುಮುರಿ ವ್ಯಾಪಾರದ ಗೂಡಂಗಡಿಗೆ ಢಿಕ್ಕಿ ಹೊಡೆದು ಅಂಗಡಿಯನ್ನ ಉಡೀಸ್ ಮಾಡಿದ್ದಲ್ಲದೆ, ಮರಕ್ಕೆ ಢಿಕ್ಕಿ ಹೊಡೆದು ನಜ್ಜುಗುಜ್ಜಾಗಿದ್ದು , ಕಾರಿನ ಧಾವಂತಕ್ಕೆ ಬೀದಿ ನಾಯಿಯೊಂದು ಬಲಿಯಾದ ಘಟನೆ ರಾ.ಹೆ.66 ರ ಅಂಬಿಕಾ ರೋಡ್ ಎಂಬಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಮೂವರು ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಾಂಡೇಶ್ವರದ ಮೂವರು ಯುವಕರು ನಿನ್ನೆ ಮಧ್ಯರಾತ್ರಿ 12.30 ರ ವೇಳೆಗೆ ಮಂಗಳೂರಿನಿಂದ ಮಂಜೇಶ್ವರದ ಹೊಸಂಗಡಿಗೆ ಸ್ವಿಪ್ಟ್ ಕಾರಲ್ಲಿ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಮೊದಲು ಚುರುಮುರಿ ಗೂಡಂಗಡಿಗೆ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಗೂಡಂಗಡಿ ದೂರಕ್ಕೆ ಎಸೆಯಲ್ಪಟ್ಟಿದೆ. ನಂತರ ಕಾರು ಅಲ್ಲೇ ಇದ್ದ ಮರವೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಕಾರಿನ ಸಹ ಸವಾರನೋರ್ವ ಗಂಭೀರ ಗಾಯಗೊಂಡಿದ್ದು ಉಳಿದಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.

ಘಟನೆಯಿಂದ ತೊಕ್ಕೊಟ್ಟು ನಿವಾಸಿ ಗಣೇಶ್ ಎಂಬವರ ಚುರುಮುರಿ ಅಂಗಡಿ ಸಂಪೂರ್ಣ ನಜ್ಜು ಗುಜ್ಜಾಗಿ ಸುಮಾರು ಮೂವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ. ಒಂದು ವೇಳೆ ಹಗಲಲ್ಲಿ ಈ ಘಟನೆ ನಡೆದಿದ್ದರೆ ಚುರುಮುರಿ ಅಂಗಡಿಯ ಗಣೇಶ್ ಅವರ ಪ್ರಾಣ ಉಳಿಯುತ್ತಿರಲಿಲ್ಲ. ಕಾರಿನ ಧಾವಂತಕ್ಕೆ ಬೀದಿಯಲ್ಲಿದ್ದ ಶ್ವಾನವೊಂದು ಬಲಿಯಾಗಿದೆ. ಟ್ರಾಫಿಕ್ ಪೊಲೀಸರು ಸಮರ್ಪಕ ತನಿಖೆ ನಡೆಸಿ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Mangalore Car accident at Thokotuu, rams shops, dog killed. Three Youths from Pandeshwar were going towards Manjeshwara in the swift car. As the car lost control he rammed a petty shop and then killed a dog.